ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ ಬಿದ್ದು ಮಹಿಳೆ ಸಾವು

Last Updated 4 ಮಾರ್ಚ್ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ಪುರ ಸಮೀಪದ ತಂಬು­ಚೆಟ್ಟಿಪಾಳ್ಯದಲ್ಲಿ ಬುಧವಾರ ಟಿಪ್ಪರ್‌ ಡಿಕ್ಕಿ ಹೊಡೆದಿದ್ದರಿಂದ ಕುಸಿದ ತಡೆ­ಗೋಡೆಯು ಕಾರ್ಮಿಕರ ಮೇಲೆ ಬಿದ್ದಿ­ದ್ದರಿಂದ ಸ್ಟ್ಯಾನಿ  ಮೇರಿ (45) ಎಂಬುವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಟಿಪ್ಪರ್‌ ವಾಹನವೊಂದು ಕಟ್ಟಡ ನೆಲ­ಸಮ ಮಾಡಿದ್ದ ಅವಶೇಷಗಳನ್ನು ಸುರಿ­ಯಲು ಮಧ್ಯಾಹ್ನ 12.30ರ ಸುಮಾರಿಗೆ ತಂಬುಚೆಟ್ಟಿಪಾಳ್ಯಕ್ಕೆ ಬಂದಿತ್ತು. ಆಗ ಚಾಲಕ ಹಿಮ್ಮುಖವಾಗಿ ಟಿಪ್ಪರ್‌ ಚಾಲನೆ ಮಾಡಿ­ದ್ದಾನೆ. ಇಳಿಜಾರು ಇದ್ದಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ, ಉದ್ಯಾನದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಆಗ ತಡೆಗೋಡೆ ಮತ್ತು ಟಿಪ್ಪರ್‌ನಲ್ಲಿದ್ದ ಅವಶೇಷಗಳು, ಉದ್ಯಾನ ಸ್ವಚ್ಛಗೊಳಿಸು­ತ್ತಿದ್ದ ಸ್ಟ್ಯಾನಿ ಮೇರಿ, ಸಿದ್ದಮ್ಮ (55) ಹಾಗೂ ಲಾರ್ಡ್‌ ಮೇರಿ (50) ಅವರ ಮೇಲೆ ಬಿದ್ದವು. ತೆಲೆಗೆ ಗಂಭೀರ ಪೆಟ್ಟು ಬಿದ್ದಿ­ದ್ದರಿಂದ ಸ್ಟ್ಯಾನಿ ಮೇರಿ ಸ್ಥಳದಲ್ಲೇ ಮೃತ­ಪಟ್ಟರು. ಗಾಯಗೊಂಡಿರುವ ಸಿದ್ದಮ್ಮ ಹಾಗೂ ಲಾರ್ಡ್‌ ಮೇರಿ ಅವರನ್ನು ಸ್ಥಳೀ­ಯರು ಕೂಡಲೇ ಕೆ.ಆರ್‌.ಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ವೈದ್ಯರ ಸೂಚನೆಯಂತೆ ಲಾರ್ಡ್‌ ಮೇರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ವರ್ಗಾ­ಯಿ­­ಸಲಾಯಿತು.

ಘಟನೆ ನಂತರ ಚಾಲಕ ಪರಾರಿಯಾ­ಗಿ­ದ್ದಾನೆ. ವಾಹನವನ್ನು ಜಪ್ತಿ ಮಾಡಲಾ­ಗಿದ್ದು, ಅದರ ನೋಂದಣಿ ಸಂಖ್ಯೆ ಆಧರಿಸಿ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT