ಮೊಳಕಾಲ್ಮುರು: ಜೀವಾವಧಿ ಶಿಕ್ಷೆಗೆ ಗುರಿಯಾದ ಕೆಲವೇ ಹೊತ್ತಿನ ನಂತರ ಚಿತ್ರದುರ್ಗ ಪೊಲೀಸರಿಂದ ತಪ್ಪಿಸಿ ಕೊಂಡಿದ್ದ ಕೈದಿ ನಾಗರಾಜನನ್ನು ಮಂಗ ಳವಾರ ಬೆಳಿಗ್ಗೆ ಪಟ್ಟಣದಲ್ಲಿ ಬಂಧಿಸಲಾಗಿದೆ. ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದ ಬಸ್ ಏಜೆಂಟ್ ನಾಗರಾಜ್ (32) ಸೋಮವಾರ ಚಿತ್ರದುರ್ಗ ನ್ಯಾಯಾಲಯ ಆವರಣದಿಂದ, ಜೈಲಿಗೆ ಕರೆದುಕೊಂಡು ಹೋಗುವಾಗ ತಪ್ಪಿಸಿ ಕೊಂಡಿದ್ದ.
ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪ ಈತನ ಮೇಲಿದ್ದು, ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರೋಪಿ ಯನ್ನು ಜೈಲಿಗೆ ಕರೆದುಕೊಂಡು ಹೋಗು ವಾಗ ನ್ಯಾಯಾಲಯ ಆವರಣದಲ್ಲಿ ಎಎಸ್ಐ ಕೆಂಚಪ್ಪ ಅವರನ್ನು ತಳ್ಳಿ ತಪ್ಪಿಸಿಕೊಂಡಿದ್ದ. ಸಂಬಂಧಿಗಳ ಊರಾದ ಆಂಧ್ರದ ರಾಯದುರ್ಗಕ್ಕೆ ಹೋಗುವಾಗ ಮಾರ್ಗ ಮಧ್ಯೆ ಮೊಳಕಾಲ್ಮುರಿನ ಬಸ್ ನಿಲ್ದಾಣ ದಲ್ಲಿ ಈತನನ್ನು ಬಂಧಿಸಲಾಯಿತು ಎಂದು ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.