ರಾಮೇಶ್ವರ(ಪಿಟಿಐ): ಶ್ರೀಲಂಕಾದ ಜಲಪರಿಧಿಗೆ ಅಕ್ರಮವಾಗಿ ನುಸುಳಿದ ಆರೋಪದಲ್ಲಿ ತಮಿಳುನಾಡಿನ 14 ಮೀನುಗಾರರನ್ನು ಶ್ರೀಲಂಕಾ ನೌಕಾ ದಳ ಭಾನುವಾರ ಬಂಧಿಸಿದೆ.
ಬಂಧಿತ ಮೀನುಗಾರರು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ರಾಮೇಶ್ವರಂ ಮತ್ತು ಜಗದಪಟ್ಟಿನಂ ಪ್ರದೇಶಕ್ಕೆ ಸೇರಿದವರು ಎಂದು ಲಂಕಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗೋಪಿನಾಥ್ ಮತ್ತು ಶೇಖರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಂಧಿತರಿಂದ ಮೂರು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಜಾಫ್ನಾದ ಕರೈನಗರಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.