ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಪಕ್ಷಗಳಿಂದ ರಸ್ತೆ, ರೈಲು ತಡೆ

ಮೇಕೆದಾಟು ಯೋಜನೆಗೆ ವಿರೋಧ
Last Updated 24 ನವೆಂಬರ್ 2014, 11:15 IST
ಅಕ್ಷರ ಗಾತ್ರ

ನಾಗಪಟ್ಟಣಂ (ಪಿಟಿಐ): ಕರ್ನಾಟಕ ಕಾವೇರಿ ಕೊಳ್ಳದ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ರಾಜಕೀಯ ಪಕ್ಷಗಳು ಇದೇ 29ರಂದು ರಸ್ತೆ ಹಾಗೂ ರೈಲು ತಡೆ ನಡೆಸಲು ನಿರ್ಧರಿಸಿವೆ.

ಡಿಎಂಕೆ ಪಕ್ಷದ ಜಿಲ್ಲಾ ಘಟಕ ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದು ಇದಕ್ಕೆ ಸಿಪಿಐ, ಸಿಪಿಐ (ಎಂ), ಡಿವೈಎಫ್‌ಐ, ಐಯುಎಂಎಲ್‌, ಡಿಎಂಡಿಕೆ, ಪಿಎಂಕೆ ಮತ್ತು ದ್ರಾವಿಡ ಕಜಗಂ ಪಕ್ಷಗಳು ಬೆಂಬಲ ಸೂಚಿಸಿವೆ.

‘ಜಿಲ್ಲೆಯ ಉದ್ಯಮ ಸಂಘಟನೆಗಳು ನಮ್ಮ ಬೆಂಬಲಕ್ಕೆ ಮುಂದಾಗಿವೆ. ನ.29ರಂದು ಜಿಲ್ಲೆಯ ನೂರಕ್ಕೂ ಹೆಚ್ಚು ಕಡೆ ರಸ್ತೆ ತಡೆ ನಡೆಸುತ್ತೇವೆ. ಮಲಿಯಾದುತುರೈ, ಸರ್ಕಾಜಿ ಮತ್ತು ನಾಗಪಟ್ಟಣಂನಲ್ಲಿ ರೈಲು ತಡೆ ನಡೆಸಲಾಗುವುದು’ ಎಂದು ಮಾಜಿ ಸಂಸದ ಹಾಗೂ ಡಿಎಂಕೆ ಪಕ್ಷದ ನಾಗಪಟ್ಟಣಂ ಘಟಕದ ಕಾರ್ಯದರ್ಶಿ ಎ.ಕೆ.ಎಸ್‌.ವಿಯಜನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT