ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಗುಪ್ಪದಲ್ಲಿ 5 ಸೆಂ.ಮೀ ಮಳೆ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿಯ ಹಲವೆಡೆ ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ತಾಳಗುಪ್ಪದಲ್ಲಿ 5 ಸೆಂ.ಮೀ ಮಳೆ­ಯಾಗಿದೆ. ಗೇರುಸೊಪ್ಪ, ಹೊಸನಗರ, ಜಯಪುರ 4, ಕುಮಟಾ, ಅಂಕೋಲ, ನಾಪೋಕ್ಲು, ಶಿವಮೊಗ್ಗ, ಶೃಂಗೇರಿ 3, ಮೂಲ್ಕಿ, ಉಪ್ಪಿನಂಗಡಿ, ತೀರ್ಥಹಳ್ಳಿ, ಕಳಸ 2, ಕಾರ್ಕಳ,  ಹೊನ್ನಾವರ, ಬನವಾಸಿ, ಲಿಂಗನಮಕ್ಕಿ, ಸಾಗರ, ಹುಲಿಕಲ್, ಶಿರಾಳಕೊಪ್ಪ, ಮೂಡಿಗೆರೆ, ಮಡಿಕೇರಿ, ಚಾಮರಾಜನಗರ,  ಕುಣಿಗಲ್ ಮತ್ತು ಮಾಗಡಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಮತ್ತು ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT