ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿಯ ಹಲವೆಡೆ ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.
ತಾಳಗುಪ್ಪದಲ್ಲಿ 5 ಸೆಂ.ಮೀ ಮಳೆಯಾಗಿದೆ. ಗೇರುಸೊಪ್ಪ, ಹೊಸನಗರ, ಜಯಪುರ 4, ಕುಮಟಾ, ಅಂಕೋಲ, ನಾಪೋಕ್ಲು, ಶಿವಮೊಗ್ಗ, ಶೃಂಗೇರಿ 3, ಮೂಲ್ಕಿ, ಉಪ್ಪಿನಂಗಡಿ, ತೀರ್ಥಹಳ್ಳಿ, ಕಳಸ 2, ಕಾರ್ಕಳ, ಹೊನ್ನಾವರ, ಬನವಾಸಿ, ಲಿಂಗನಮಕ್ಕಿ, ಸಾಗರ, ಹುಲಿಕಲ್, ಶಿರಾಳಕೊಪ್ಪ, ಮೂಡಿಗೆರೆ, ಮಡಿಕೇರಿ, ಚಾಮರಾಜನಗರ, ಕುಣಿಗಲ್ ಮತ್ತು ಮಾಗಡಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಮತ್ತು ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.