ನವದೆಹಲಿ (ಐಎಎನ್ಎಸ್): ಕಾಂಗ್ರೆಸ್್ ಪಕ್ಷವು ತೃತೀಯ ರಂಗಕ್ಕೆ ಬೆಂಬಲ ನೀಡುವ ಸಾಧ್ಯತೆ ತೇಲಿಬಿಟ್ಟ ಬೆನ್ನಲ್ಲಿಯೇ ಬಿಜೆಪಿ ಮುಖಂಡ ಅರುಣ್್ ಜೇಟ್ಲಿ, ತೃತೀಯ ರಂಗ ರಚನೆಯಾಗುವ ಸಾಧ್ಯತೆಯೇ ಇಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದಾರೆ.
ಅಲ್ಲದೇ ತೃತೀಯ ರಂಗ ರಚನೆಗೆ ಟೊಂಕ ಕಟ್ಟಿ ನಿಂತವರು ‘ಅಸ್ಥಿರತೆಯ ವ್ಯಾಪಾರಿಗಳು’ ಎಂದು ಭಾನುವಾರ ಲೇವಡಿ ಮಾಡಿದ್ದಾರೆ.
‘ತಮ್ಮ ಪಕ್ಷವು ತೃತೀಯ ರಂಗ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್್ ಮುಖಂಡ ಸಲ್ಮಾನ್್ ಖುರ್ಷಿದ್ ಹೇಳಿದ್ದಾರೆ. ಕಾಂಗ್ರೆಸ್್ ಪಕ್ಷವು ಅಕ್ಷರಶಃ ಸೋಲು ಒಪ್ಪಿಕೊಂಡಿದೆ ಎನ್ನುವುದನ್ನು ಖುರ್ಷಿದ್್ ಹೇಳಿಕೆ ಧ್ವನಿಸುತ್ತದೆ’ ಎಂದೂ ಜೇಟ್ಲಿ ವ್ಯಂಗ್ಯವಾಡಿದ್ದಾರೆ.
ಹೈದರಾಬಾದ್್ ವರದಿ: ಈ ನಡುವೆ, ಕೇಂದ್ರ ಸಚಿವ ಜೈರಾಮ್ ರಮೇಶ್್, ತೃತೀಯ ರಂಗಕ್ಕೆ ಕಾಂಗ್ರೆಸ್ ಪಕ್ಷವು ಹೊರಗಿನಿಂದ ಬೆಂಬಲ ನೀಡುವುದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಬಾಹ್ಯ ಬೆಂಬಲಕ್ಕೆ ಬದಲು, ತಮ್ಮ ಪಕ್ಷವು ಸರ್ಕಾರದ ಭಾಗವಾಗಿರಬೇಕು ಎನ್ನುವುದು ಅವರ ಇಂಗಿತವಾಗಿದೆ.