ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಡೂಲ್ಕರ್‌, ಬಚ್ಚನ್‌ ದಿನಗೂಲಿಗಳು!

Last Updated 26 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್‌): ಗೋವಾದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜ­ನೆಯ (ಎಂಜಿ­ಎನ್‌­ಆರ್‌ಇಜಿಎಸ್‌) ದಿನ­ಗೂಲಿ ಕಾರ್ಮಿಕರ ಪಟ್ಟಿಯಲ್ಲಿ  ಮುಖ್ಯ­ಮಂತ್ರಿ ಮನೋಹರ್‌ ಪರಿಕ್ಕರ್‌, ಸಚಿನ್‌ ತೆಂಡೂಲ್ಕರ್‌,  ಕಪಿಲ್‌ ದೇವ್‌, ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ಯುವ­ರಾಜ್‌ ಸಿಂಗ್‌, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್‌, ನಟ ಅಮಿತಾಭ್‌ ಬಚ್ಚನ್‌, ಪರೇಶ್‌ ರಾವಲ್‌ ಸೇರಿದಂತೆ ಹಲವು ಕೋಟ್ಯಧೀಶರು ಹೆಸರಿವೆ.

ಈ ವಿಷಯ ಕೇಳಿದ ಯಾರಾದರೂ ಆಶ್ಚರ್ಯಪಡುವುದು ಸಹಜ. ಆದರೆ, ಗೋವಾ ಸರ್ಕಾರದ ದಾಖಲೆಗಳನ್ನು ತಿರುವಿ ಹಾಕಿದರೆ ಇದು ನಿಜ ಎಂಬುದು ಗೊತ್ತಾಗುತ್ತದೆ.

ಕ್ರಿಕೆಟ್‌ನಿಂದ ಪ್ರಖ್ಯಾತ­ರಾದ ಸಚಿನ್‌ ತೆಂಡೂಲ್ಕರ್‌ ಅವರಿಗೆ ಭಾರತ ರತ್ನ ಸಿಕ್ಕಿರಬಹುದು. ಆದರೆ,  ಉದ್ಯೋಗ ಖಾತ್ರಿ  ದಿನಗೂಲಿ ನೌಕ­ರರ ಪಟ್ಟಿಯಲ್ಲಿ ಅವರ ಹೆಸರೂ ಇದೆ.

ಇನ್ನೊಂದು ವಿಶೇಷವೆಂದರೆ ಫಲಾ­ನುಭವಿಗಳ ಪಟ್ಟಿಯಲ್ಲಿ ಸಚಿನ್‌ ಅವರ ಪತ್ನಿ ಅಂಜಲಿ, ಪುತ್ರಿ ಸಾರಾ ಮತ್ತು ಮಗ ಅರ್ಜುನ್‌ ಅವರ ಹೆಸ­ರು­ಗಳೂ ಇವೆ ಎಂದು ಗೋವಾ ಪರಿವ­ರ್ತನ್‌ ಮಂಚ್‌ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT