ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನ ಸರಣಿಗೆ ಕರುಣ್‌ ಉಪನಾಯಕ

Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಆಸ್ಟ್ರೇಲಿಯಾ ‘ಎ’ ವಿರುದ್ಧದ ನಾಲ್ಕು ದಿನಗಳ ಟೆಸ್ಟ್‌ ಸರಣಿಯಲ್ಲಿ ಉತ್ತಮ ಆಟ ಆಡಿದ್ದ ಕರ್ನಾಟಕದ ಕರುಣ್‌ ನಾಯರ್‌ ಅವರನ್ನು ಮುಂಬರುವ ತ್ರಿಕೋನ ಏಕದಿನ ಸರಣಿಗೆ ಭಾರತ ‘ಎ’ ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ.

ಆಸ್ಟ್ರೇಲಿಯಾ ‘ಎ’, ದಕ್ಷಿಣ ಆಫ್ರಿಕಾ ‘ಎ’ ಮತ್ತು ಭಾರತ ‘ಎ’ ತಂಡಗಳ ನಡುವಣ ಈ ಸರಣಿ ಆಗಸ್ಟ್‌ 5ರಿಂದ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶನಿವಾರ ಅಖಿಲ ಭಾರತ ಸೀನಿಯರ್‌ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು ದೆಹಲಿಯ ಭರವಸೆಯ ಬ್ಯಾಟ್ಸ್‌ಮನ್‌ ಉನ್ಮುಕ್ತ್‌ ಚಾಂದ್‌ ಅವರಿಗೆ  ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ.

ಕರ್ನಾಟಕದ ಮಯಂಕ್‌ ಅಗರವಾಲ್‌ ಮತ್ತು ಮನೀಷ್‌ ಪಾಂಡೆ ಕೂಡಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ಟೂರ್ನಿಯ ಫೈನಲ್‌ ಪಂದ್ಯ ಆಗಸ್ಟ್‌ 14ರಂದು ಜರುಗಲಿದೆ.

ಈ ಸರಣಿಯ ಬಳಿಕ  ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಸರಣಿ ಆಗಸ್ಟ್‌ 18ರಿಂದ ವಯನಾಡಿನಲ್ಲಿ ನಡೆಯಲಿದೆ.

ಅಂಬಟಿ ರಾಯುಡು ಈ ಸರಣಿಯಲ್ಲಿ ಭಾರತ ತಂಡದ ಸಾರಥ್ಯ ವಹಿಸಲಿದ್ದು ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್‌ ತಂಡದಲ್ಲಿದ್ದಾರೆ.

ತಂಡ ಇಂತಿದೆ: 
ತ್ರಿಕೋನ ಏಕದಿನ ಸರಣಿಗೆ: ಉನ್ಮುಕ್ತ್‌ ಚಾಂದ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಮಯಂಕ್‌ ಅಗರ ವಾಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಸಂಜು ಸ್ಯಾಮ್ಸನ್‌, ಅಕ್ಷರ್‌ ಪಟೇಲ್‌, ಪರ್ವೇಜ್‌ ರಸೂಲ್‌, ಕರಣ್‌ ಶರ್ಮಾ, ಧವಳ್‌ ಕುಲಕರ್ಣಿ, ಸಂದೀಪ್‌ ಶರ್ಮಾ, ರುಶ್‌ ಕಲಾರಿಯಾ, ಮಂದೀಪ್‌ ಸಿಂಗ್‌, ಗುರ್‌ಕೀರತ್‌ ಸಿಂಗ್‌ ಮಾನ್‌ ಮತ್ತು ರಿಶಿ ಧವನ್‌.

ಭಾರತ ‘ಎ’ ಟೆಸ್ಟ್‌ ತಂಡ: ಅಂಬಟಿ ರಾಯುಡು (ನಾಯಕ), ಕರುಣ್‌ ನಾಯರ್‌, ಅಭಿನವ್‌ ಮುಕುಂದ್‌, ಅಂಕುಶ್‌ ಬೇನ್ಸ್‌, ಶ್ರೇಯಸ್‌ ಅಯ್ಯರ್‌, ಬಾಬಾ ಅಪರಾಜಿತ್‌, ವಿಜಯ್‌ ಶಂಕರ್‌, ಜಯಂತ್‌ ಯಾದವ್‌, ಅಕ್ಷರ್‌ ಪಟೇಲ್‌, ಕರಣ್‌ ಶರ್ಮಾ, ಅಭಿಮನ್ಯು ಮಿಥುನ್‌, ಶ್ರಾದೂಲ್‌ ಠಾಕೂರ್‌, ಈಶ್ವರ್‌ ಪಾಂಡೆ, ಶೆಲ್ಡನ್‌ ಜಾಕ್ಸನ್‌ ಮತ್ತು ಜೀವನ್‌ಜ್ಯೋತ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT