ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆಗೆ ಯತ್ನ: ಐವರ ಬಂಧನ

ಬಂಧಿತರಿಂದ ಕಾರು, ಬೈಕ್, ಮಾರಕಾಸ್ತ್ರಗಳ ವಶ, ಒಬ್ಬ ಪರಾರಿ
Last Updated 7 ಜುಲೈ 2015, 6:34 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಹಳೆಯ ಬೆಂಗಳೂರು ರಸ್ತೆಯಲ್ಲಿರುವ ಒಂಟಿ ಮನೆಯೊಂದರಲ್ಲಿ ದರೋಡೆಗಾಗಿ ಸಿದ್ಧತೆ ನಡೆಸುತ್ತಿದ್ದ ಐವರು ದರೋಡೆಕೋರ ರನ್ನು ನಗರ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕೈಗಾರಿಕಾ ವಲಯದ ಒಂಟಿ ಮನೆ ಮೇಲೆ ರಾತ್ರಿ ಎಎಸ್‌ಐ ಶಾಂಸುಂದರ್ ಪ್ರಸಾದ್ ಮತ್ತು ತಂಡ ದಾಳಿ ಮಾಡಿದೆ. ಈ ಸಂದರ್ಭ ಆರು ದರೋಡೆಕೋರರನ್ನು ಸೆರೆ ಹಿಡಿದಿದ್ದಾರೆ. ಆದರೆ, ಅದರಲ್ಲಿ ಒಬ್ಬ ಪರಾರಿಯಾಗಿದ್ದಾರೆ. ಉಳಿದ ಐವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

ಬಂಧಿತರನ್ನು ದಾವಣಗೆರೆ ಜಿಲ್ಲೆ ಕಕ್ಕರಗೊಳ್ಳ ಗ್ರಾಮದ ಅಲ್ಲಾಭಕ್ಷಿ (25), ಭದ್ರಾವತಿ ಅಮೀರ್ ಜಾನ್ ಕಾಲೊನಿ ಯವರಾದ ಚಾಂದ್ ಪಾಷ (30), ಅಜ್ರತ್ (23), ದಾವಣಗೆರೆಯ ನಿವಾಸಿ ಗಳಾದ ಶಾರುಖ್‌ ಖಾನ್ (22), ಶಿವಕುಮಾರ (23) ಎಂದು ಗುರುತಿ ಸಿದ್ದಾರೆ. ಭರಮಸಾಗರದ ಅಹ್ಮದ್ ಎಂಬುವವನು ಪರಾರಿಯಾಗಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಈ ಕಳ್ಳರ ತಂಡದಲ್ಲಿರುವ ಅಲ್ಲಭಕ್ಷಿ ಭರಮಸಾಗರ, ಹಾವೇರಿ ಜಿಲ್ಲೆ ಬ್ಯಾಡಗಿ ಹಾಗೂ ವಾರದ ಹಿಂದೆ ನಗರದ ನಾಮಕ್ಕಲ್ ಗ್ಯಾರೇಜ್ ಸಮೀಪ ಟ್ರಾನ್ಸ್‌ಪೋರ್ಟ್‌ ಒಂದರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲಭಕ್ಷಿ ಜೊತೆ, ಅಹ್ಮದ್, ಶಾರುಖ್‌ಖಾನ್ ಅವರು ತುಮಕೂರಿನ ಕ್ಯಾತ್ಸಂದ್ರದಿಂದ ಪಲ್ಸರ್ ಬೈಕ್ ಕಳವು ಮಾಡಿರುವುದಾಗಿ ಒಪ್ಪಿಕೊಂಡದ್ದಾರೆ ಎಂದು ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಧಿತರಿಂದ ಒಂದು ಕಾರು, ಪಲ್ಸರ್ ಬೈಕ್, ದರೋಡೆ ಕೃತ್ಯಕ್ಕೆ ಬಳಸುತ್ತಿದ್ದ ಚಾಕುಗಳು, ದೊಣ್ಣೆಗಳು, ಖಾರದ ಪುಡಿ ಪೊಟ್ಟಣಗಳು, ಪ್ಲಾಸ್ಟಿಕ್‌ ಟಾರ್ಚ್‌, ನೂಲಿನ ಹಗ್ಗ, ಕಬ್ಬಿಣದ ರಾಡ್, ಮೊಬೈಲ್‌ ವಶಪಡಿಸಿ ಕೊಂಡು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಪ್ಪಿಸಿಕೊಂಡವನಿ ಗಾಗಿ ಪೊಲೀಸರು ಹುಡುಕಾಟ ನಡಸುತ್ತಿದ್ದಾರೆ.

ದರೋಡೆಕೋರರ ಪತ್ತೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿ ನಾಗರಾಜ್, ಇಮಾಮ್ ಹುಸೇನ್, ಚಿದಾನಂದ, ದಿವಾಕರ, ಪ್ರಕಾಶ್, ಶ್ರೀನಿವಾಸ್ ಎಚ್ ಮತ್ತು ಗ್ರಾಮಾಂತರ ಪಿಎಸ್‌ಐ ಸತೀಶ್, ಭರಮಸಾಗರ ಪಿಎಸ್‌ಐ ಪ್ರಕಾಶ್ ಗೌಡ ಪಾಟೀಲ್, ಅಣ್ಣೇಶ್, ಪ್ರಭು, ಕುಮಾರ್ ಇತರರನ್ನು ಎಸ್‌ಪಿ ಅನುಚೇತ್ ಹಾಗೂ ಡಿವೈಎಸ್‌ಪಿ ಕವಳಪ್ಪ ಅಭಿನಂದಿಸಿ, ಬಹುಮಾನ  ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT