ಮಂಗಳವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಶರಣಾಗುವಂತೆ ಸೂಚಿಸಿದರೂ ದರೋಡೆಕೋರರು ಪೊಲೀಸರ ಮೇಲೆ ಕಬ್ಬಿಣದ ಸರಳಿನಿಂದ ದಾಳಿ ನಡೆಸಲು ಮುಂದಾದರು. ರಕ್ಷಣೆಗಾಗಿ ಇನ್ಸ್ಪೆಕ್ಟರ್ ಪಂಜಿತ್ ಗುಂಡು ಹಾರಿಸಿದರು. ಗುಂಡು ದರೋಡೆಕೋರರ ಕಾಲಿಗೆ ತಗುಲಿ ಕುಸಿದು ಬಿದ್ದರು. ಇಬ್ಬರಿಗೂ ಗಾಯವಾಗಿದೆ. ಇಬ್ಬರನ್ನೂ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಕೋರರು ನಡೆಸಿದ ದಾಳಿಯಲ್ಲಿ ಹೆಡ್ ಕಾನ್ಸ್ಟೆಬಲ್ ನಾಗಭೂಷಣ್ ಅವರಿಗೂ ಗಾಯವಾಗಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತರನ್ನು ಪಶ್ಚಿಮ ಬಂಗಾಳದ ಮಿಥುನ್ ಅಖಿಲ್ ಎಂದು ಗುರುತಿಸಲಾಗಿದೆ.