ರಾಮು ಫಿಲ್ಮ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸಿರುವ 35ನೇ ಅದ್ದೂರಿ ಚಿತ್ರ ಇದು. ಈ ಚಿತ್ರಕ್ಕೆ ಅನಿಲ್ಕುಮಾರ್ ಸಂಭಾಷಣೆ, ರಾಜೇಶ್ ಕಾಟ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಕೆ. ಕಲ್ಯಾಣ್ ಸಾಹಿತ್ಯ, ಎಂ.ಆರ್. ಸಂಕಲನ, ಪಳನಿರಾಜ್ ಸಾಹಸವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಓಂ ಸಾಯಿ ಪ್ರಕಾಶ್ ಅವರದ್ದು.
ತಾರಾಗಣದಲ್ಲಿ ಮಾಲಾಶ್ರೀ, ಶ್ರೀನಿವಾಸಮೂರ್ತಿ, ಹೇಮಾ ಚೌಧರಿ, ಪವಿತ್ರಾ ಲೋಕೇಶ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಸತ್ಯಪ್ರಕಾಶ್, ಮುಖ್ಯಮಂತ್ರಿ ಚಂದ್ರು, ರಮೇಶ್ಭಟ್, ಎಂ.ಎನ್. ಲಕ್ಷ್ಮೀದೇವಿ, ಕೋಟೆ ಪ್ರಭಾಕರ್, ಮುನಿ ಮುಂತಾದವರಿದ್ದಾರೆ.
ಜತೆಗೆ ನಟಿ ಮಾಲಾಶ್ರೀ ಚಿತ್ರರಂಗಕ್ಕೆ ಬಂದು ಈಗ 25 ವರ್ಷವಾಗಿದೆ. 1990ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಈ ನಟಿ ‘ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪರಿಚಿತರಾದರು. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು, ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.