ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ: ಮೀನುಗಾರರಿಗೆ ಗಾಯ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಮೇಶ್ವರಂ(ಪಿಟಿಐ):  ಕಚ್ಛತೀವು ಪ್ರದೇಶದ ಬಳಿ ಶನಿವಾರ ಭಾರತೀಯ ಮೀನುಗಾರರಿಗೆ   ಪಾನೀಯ ಮತ್ತು ಸಿಹಿ ವಿತರಿಸಿ ಅಚ್ಚರಿ ಹುಟ್ಟಿಸಿದ್ದ ಶ್ರೀಲಂಕಾ ನೌಕಾಪಡೆ, ಮಂಗಳವಾರ ಧನು­ಷ್ಕೋಟಿ ಸಮೀಪ ಭಾರತದ ಸಮುದ್ರ ಗಡಿ­ಒಳಗೆ ಮೀನುಗಾರರ ಮೇಲೆ ಹಲ್ಲೆ ನಡೆಸಿದೆ.

ಈ ಘಟನೆಯಲ್ಲಿ ಎಂಟು ಮೀನು­ಗಾ­ರರು ಗಾಯಗೊಂಡಿದ್ದಾರೆ ಎಂದು ಮೀನು­ಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ನಾಲ್ವರು ಮೀನುಗಾರರಿಗೆ ತಲೆ, ಕೈ ಮತ್ತು ಭುಜದ ಮೇಲೆ ಪೆಟ್ಟು ಬಿದ್ದ ಪರಿಣಾಮ ಗಂಭೀರವಾಗಿ ಗಾಯ­­­ಗಳಾ­­ಗಿವೆ. ಉಳಿದವರಿಗೆ ಚಿಕ್ಕ­ಪುಟ್ಟ ಗಾಯ­­ಗ ಳಾ­ಗಿವೆ.

ಅವರೆಲ್ಲರನ್ನು ಆಸ್ಪತ್ರೆಗೆ ದಾಖ­ಲಿಸಲಾಗಿದೆ ಎಂದು  ತಿಳಿಸಿವೆ.

ಘಟನೆ ವೇಳೆ ಮೀನುಗಾರರ ಎರಡು ದೋಣಿ ಮತ್ತು ಹತ್ತು ಬಲೆ­ಗಳಿಗೆ ಹಾನಿಯಾಗಿದೆ. ಲಂಕಾ ನೌಕಾ ಸಿಬ್ಬಂದಿ­ಮೀನುಗಾರರ ಮೇಲೆ ಬಾಟಲಿ, ಕಲ್ಲು ಮತ್ತು ಕಟ್ಟಿಗೆಗಳನ್ನು ಎಸೆದು ದಾಳಿ ಮಾಡಿದ್ದಾರೆ. ‘ಮಂಗಳವಾರ ನಟೆದ ಘಟನೆ­ಯಲ್ಲಿ ಮೀನುಗಾರರ ತಪ್ಪಿಲ್ಲ. ಧನು­ಷ್ಕೋಟಿ ಕಡಲಲ್ಲಿ ಅವರ ಮೇಲೆ ಬಾಟಲಿ, ಕಲ್ಲು ಮತ್ತು ಕಟ್ಟಿಗೆಯಿಂದ ಥಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT