ಬೆಂಗಳೂರು: ಬೈಯಪ್ಪನಹಳ್ಳಿ-–ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದ ನಡುವೆ 2012ರಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ‘ಅಟ್ಕ್ಯಾಗ್ ಸೈಕಲ್ ಯೋಜನೆ’ ಜನಸ್ಪಂದನೆಯಿಲ್ಲದೆ ಸೊರಗಿದೆ.
ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಸೈಕಲ್ ಬಳಕೆಯನ್ನು ಉತ್ತೇಜಿಸಲು ಬಿಬಿಎಂಪಿಯು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಮತ್ತು ಕೆರ್ಬೆರಾನ್ ಸಂಸ್ಥೆಯ ಸಹಯೋಗದೊಂದಿಗೆಯೋಜನೆಯನ್ನು ಆರಂಭಿಸಿತ್ತು.
ಬಿಬಿಎಂಪಿ ಸಹಯೋಗದಿಂದ ನಗರದ ಅನಿಲ್ ಕುಂಬ್ಳೆ ವೃತ್ತ, ಬಿಗ್ರೇಡ್ ವೃತ್ತ ಮೆಯೋಹಾಲ್ನ ಯುಟಿಲಿಟಿ ಕಟ್ಟಡ ಬಳಿ ‘ಡಾಕಿಂಗ್
ಏನಿದು ಅಟ್ಕ್ಯಾಗ್ ಸೈಕಲ್ ಲೇನ್ಗಳ ನಿರ್ಮಿಸಿ |
ಸೈಕಲ್ ನಿಲ್ದಾಣ’ ನಿಮಾರ್ಣವಾಗಿದೆ. ಯೋಜನೆ ಆರಂಭವಾಗಿ ಎರಡೂವರೆ ವರ್ಷ ಕಳೆದರೂ ಸೈಕಲ್ ಬಾಡಿಗೆಗೆ ಪಡೆಯಲು ಹೆಸರು ನೋಂದಾಯಿಸಿರುವುದು 300 ಮಂದಿ ಮಾತ್ರ.
‘ಸಂಚಾರ ಸಮಸ್ಯೆ ಕಡಿಮೆ ಮಾಡುವ ಜತೆಗೆ ನಾಗರಿಕರಲ್ಲಿ ಸೈಕಲ್ ಬಳಕೆ ಕುರಿತು ಅರಿವು ಮೂಡಿಸುವ ಯೋಜನೆ ಇದಾಗಿತ್ತು. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಪ್ರಚಾರದ ಕೊರತೆಯಿಂದ ಯೋಜನೆಗೆ ಹಿನ್ನಡೆಯಾಗಿದೆ’ ಎಂದು ಕೆರ್ಬೆರಾನ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
‘ಬೈಯಪ್ಪನ ಹಳ್ಳಿಯಿಂದ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದವರೆಗೆ ಅಟ್ಕ್ಯಾಗ್ ಕಾರ್ಯನಿರ್ವಹಿಸುತ್ತಿದೆ. ನಗರದ ಕೆಲವೇ ಕಡೆಗಳಲ್ಲಿ ಸೈಕಲ್ ಅನ್ನು ಬಾಡಿಗೆ ಪಡೆಯುವ ಸೌಕರ್ಯ ಇರುವುದರಿಂದ ಬಹುತೇಕ ಜನರಿಗೆ ಈ ಯೋಜನೆ ಇದೆ ಎನ್ನುವುದೇ ತಿಳಿದಿಲ್ಲ’ ಎಂದು ಸೈಕಲ್ ಸವಾರರೊಬ್ಬರು ದೂರುತ್ತಾರೆ.
‘ಬರೀ ಮೆಟ್ರೊ ನಿಲ್ದಾಣಗಳಲ್ಲಿ ಇಂತಹ ವ್ಯವಸ್ಥೆ ಕಲ್ಪಿಸಿದರೆ ಸಾಲದು. ನಗರದ ಪ್ರಮುಖ ರಸ್ತೆಗಳು ಹಾಗೂ ಹೆಚ್ಚು ಜನಸಂದಣಿ ಇರುವ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಶಾಂತಿನಗರ ಮತ್ತಿತರ ರಸ್ತೆಯಲ್ಲಿ ಸೈಕಲ್ ಬಾಡಿಗೆ ಪಡೆಯುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ನಾಗವಾರಪಾಳ್ಯದ ನಿವಾಸಿ ಸಂತೋಷ್ ಸಲಹೆ ನೀಡುತ್ತಾರೆ.
‘ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಬಾಡಿಗೆ ಸೈಕಲ್ ತಂಗುದಾಣಗಳಿಗೆ ಟೆಂಡರ್ ಕರೆದರೆ ಸಂಪಿಗೆ ರಸ್ತೆಯಿಂದ ಪೀಣ್ಯ ಮೆಟ್ರೊ ನಿಲ್ದಾಣದವರೆಗೂ ಯೋಜನೆಯನ್ನು ವಿಸ್ತರಿಸಲು ಸಿದ್ಧ’ ಎಂದು ಕೆರ್ಬೆರಾನ್ ಸಂಸ್ಥೆಯ ನಿರ್ದೇಶಕ ಶ್ರೀನಿಧಿ ತಿಳಿಸುತ್ತಾರೆ.
ಸೈಕಲ್ ಬಾಡಿಗೆ ಪಡೆಯಲು ಆಸಕ್ತಿ ಹೊಂದಿರುವವರು ವೆಬ್ಸೈಟ್ www.atcag.inನಲ್ಲಿ ಹೆಸರು ನೋಂದಾಯಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.