ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ವಿಜಯ್‌ ಮುಂದೆ ಶಕ್ತಿ ಪ್ರದರ್ಶನ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸ್ಥಾನ, ನಿಗಮ ಮಂಡಳಿ­ಗಳ ಅಧ್ಯಕ್ಷ ಸ್ಥಾನದ ಆಕಾಂಕ್ಷಿ­ಗಳು ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಸೂಕ್ತ ಹುದ್ದೆ ಕೊಡಿಸುವಂತೆ ದುಂಬಾಲು ಬಿದ್ದರು.

ಬಸ್‌ ಸೇರಿದಂತೆ ವಿವಿಧ ವಾಹನ­ಗಳಲ್ಲಿ ಬೆಂಬಲಿಗರನ್ನು ಕರೆತಂದಿದ್ದ ಮುಖಂಡರು, ಸಿಂಗ್ ಅವರ ಮುಂದೆ ತಮ್ಮ ಶಕ್ತಿಪ್ರದರ್ಶನ ಮಾಡಿದರು. ತಮ್ಮ ನಾಯಕನಿಗೆ ಮಂತ್ರಿ ಪದವಿ ನೀಡ­ಬೇಕು ಎಂದು ಮನವಿ ಮಾಡುವ ಭಿತ್ತಿಪತ್ರ­-ಗಳನ್ನು ಬೆಂಬಲಿಗರು ಕೈಯಲ್ಲಿ ಹಿಡಿದಿದ್ದರು. ಕುಮಾರಕೃಪಾ ಅತಿಥಿ ಗೃಹ ಮಂಗಳ­­ವಾರ ಅಕ್ಷರಶಃ ಕಾಂಗ್ರೆಸ್‌ ಕಚೇರಿಯಾಗಿ ಮಾರ್ಪಾಟಾಗಿತ್ತು. ಶಾಸಕರಾದ ಡಾ. ಮಾಲಕ­ರೆಡ್ಡಿ, ಮಾಲೀಕಯ್ಯ ಗುತ್ತೇ­­ದಾರ, ಕೆ.ಬಿ.ಕೋಳಿವಾಡ, ಪಿ.ಎಂ.­ನರೇಂದ್ರ­­ಸ್ವಾಮಿ, ಕೆ.ಎನ್‌.ರಾಜಣ್ಣ, ಎ.­ಮಂಜು, ಪಿ.ಎಂ. ಅಶೋಕ್‌, ರಾಜಶೇಖರ ಪಾಟೀಲ್‌, ಶಿವ­ಶಂಕರ ರೆಡ್ಡಿ ಸೇರಿ­ದಂತೆ ಹಲವರು ಸಿಂಗ್‌ ಅವರನ್ನು ಭೇಟಿಯಾದರು.

ಸಚಿವರ ಭೇಟಿ: ಎಚ್‌.ಸಿ ಮಹ­ದೇವಪ್ಪ, ಟಿ.ಬಿ.ಜಯಚಂದ್ರ, ಯು.ಟಿ. ಖಾದರ್‌, ಕೃಷ್ಣ­ಬೈರೇಗೌಡ ಸೇರಿದಂತೆ ಹಲವು ಸಚಿ­ವರು, ಕೆಪಿಸಿಸಿ ಅಧ್ಯಕ್ಷ ಜಿ.­ಪರಮೇಶ್ವರ್‌, ಸಂಸದ ಮುನಿಯಪ್ಪ ಮತ್ತಿತರರು ಭೇಟಿಯಾದವರಲ್ಲಿ ಸೇರಿ­ದ್ದರು.

ಕೆಪಿಸಿಸಿ ಕಚೇರಿಯಲ್ಲೂ: ಶಾಸಕರಾದ ರಾಜ­ಶೇಖರ ಪಾಟೀಲ್, ಆರ್‌.ವಿ ದೇವರಾಜ್‌ ಮತ್ತಿ­ತರರು ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದ ಕೆಪಿಸಿಸಿ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಬಂದು ಶಕ್ತಿ ಪ್ರದರ್ಶನ ನಡೆಸಿ ಮನವಿ ಪತ್ರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT