ಬೆಂಗಳೂರಿನ ಸಾರಕ್ಕಿ ಕೆರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡಗಳನ್ನು ಕೆಡಹುವ ಕಾರ್ಯ ಸತತವಾಗಿ ಮುಂದುವರಿದಿದೆ. ಮಧ್ಯಮ ವರ್ಗದ ಕುಟುಂಬಗಳು ಬೀದಿಪಾಲಾದುದು ದಾರುಣಮಯ.
ಅಕ್ರಮವನ್ನು ಕ್ರಮಪ್ರಕಾರವಾಗಿ ವ್ಯವಸ್ಥೆಗೊಳಿಸಿ, ಅಮಾಯಕರನ್ನು ವಂಚಿಸಿ ಕೊನೆಗೆ ಇಂತಹ ಅಮಾಯಕರ ನನಸಾಗಿದ್ದ ಕನಸು ಈ ರೀತಿ ಭಗ್ನಗೊಳ್ಳುವುದಕ್ಕೆ ಪ್ರತ್ಯಕ್ಷ, ಪರೋಕ್ಷ ಕಾರಣರಾದ ಭೂಗಳ್ಳರು, ಅಧಿಕಾರಿಗಳಿಗೆ ಶಿಕ್ಷೆ ಇಲ್ಲವೇ? ಕೆರೆಯಂಗಳ ತೆರವಾಗುತ್ತದೆ.