ನವದೆಹಲಿ (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಸಂಭವಿಸಿದ ಪ್ರವಾಹದಿಂದ ಒಂದು ಸಾವಿರ ಕೋಟಿ ಮೌಲ್ಯದ ಸೇಬು ಬೆಳೆ ನಾಶವಾಗಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ದೇಶದಲ್ಲಿ ಸೇಬು ದುಬಾರಿಯಾಗುವ ಸಾಧ್ಯತೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಹೇಳಿದೆ.
ಪ್ರವಾಹದಿಂದಾಗಿ ಈಗಾಗಲೇ ಕಾಶ್ಮೀರದಿಂದ ಸೇಬು ಪೂರೈಕೆ ಸ್ಥಗಿತ-ಗೊಂಡಿದ್ದು, ಬೆಲೆ ಏರಿಕೆ ಆಗುತ್ತಿದೆ. ನವರಾತ್ರಿ ಸಂದರ್ಭದಲ್ಲಿ ಶೇ40 ರಿಂದ ಶೇ 45ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು
ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ಹೇಳಿದ್ದಾರೆ.
ದೇಶದ ಬೇರೆ ಯಾವುದೇ ಭಾಗದಿಂದ ಪೂರೈಕೆ ಕೊರತೆ ನೀಗಿಸಲು ಆಗುವುದಿಲ್ಲ. ಸೇಬು ಆಮದು ಕೂಡಾ ಹೆಚ್ಚಲಿದೆ ಎಂದಿದ್ದಾರೆ.ದೆಹಲಿಯ ಸಗಟು ಮಾರುಕಟ್ಟೆಯಲ್ಲಿ ಕಾಶ್ಮೀರದ ಸೇಬು ಪೂರೈಕೆ ಪ್ರಮಾಣ ದಲ್ಲಿ ಶೇ60ರಷ್ಟು ಕುಸಿತ ಕಂಡಿದೆ ಎಂದು ಅವರು ತಿಳಿಸಿದ್ದಾರೆ.
ಸೇಬು ಉತ್ಪಾದನೆ ಕಾಶ್ಮೀರದ ಪ್ರಮುಖ ಆರ್ಥಿಕ ಮೂಲವಾಗಿದೆ. ವರ್ಷದಲ್ಲಿ ಒಟ್ಟಾರೆ ₨1,20 ಕೋಟಿ ವಹಿವಾಟು ನಡೆಯುತ್ತದೆ. ರಾಜ್ಯದ ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಶೇ 86ರಷ್ಟು ಪಾಲು ಅಂದರೆ, ಒಂದು ಸಾವಿರ ಕೋಟಿ ಮೌಲ್ಯದಷ್ಟು ಸೇಬು ಬೆಳೆಯೊಂದೇ ಹೊಂದಿದೆ. ಅಲ್ಲದೆ ಪ್ರತ್ಯಕ್ಷ ಮತ್ತು ಪೋಕ್ಷವಾಗಿ ಒಟ್ಟಾರೆ 30 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದರು.