ಮಡಿಕೇರಿ: ರಾಜ್ಯದಾದ್ಯಂತ ಲೋಕಸಭೆಗೆ ಗುರುವಾರ ಮತದಾನ ನಡೆಯುತ್ತಿದ್ದರೂ ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಮುಖ್ಯವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬಂದವರ ಸಂಖ್ಯೆ ಹೆಚ್ಚಿತ್ತು.
3– 4 ದಿನಗಳಿಂದ ಅಲ್ಲಲ್ಲಿ ಮಳೆ ಸುರಿದಿರುವುದರಿಂದ ದುಬಾರೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕೊಂಚ ಹೆಚ್ಚಾಗಿದೆ. ಪ್ರವಾಸಿಗರು ನದಿಯಲ್ಲಿ ಇಳಿದು ನೀರಿನಲ್ಲಿ ಚೆಲ್ಲಾಟಆಡಿದರು. ಆನೆ ಸಫಾರಿ ಮಾಡಿದರು.
ಯುವಕರು ಹಾಗೂ ಕುಟುಂಬ ಸಹಿತ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಈ ವಾರದಲ್ಲಿ ಸರಣಿ ರಜೆಗಳು ಬಂದಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ಟೂರಿಸ್ಟ್ ಗೈಡ್ ರಾಜು ಅಭಿಪ್ರಾಯಪಟ್ಟರು.