ಕುಂದ್ರಾರಿಂದ ಮಾಹಿತಿ ಪಡೆಯುವ ವೇಳೆ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಹಾಗೂ ಸಾಕ್ಷಿದಾರ ಆಗಿರುವ ಸಿದ್ಧಾರ್ಥ್ ತ್ರಿವೇದಿ ಕೂಡಾ ದೆಹಲಿ ಪೊಲೀಸ್ನ ವಿಶೇಷ ಘಟಕ ಕಚೇರಿಗೆ ಬಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.
ಶ್ರೀಶಾಂತ್ ಮತ್ತು ಇತರೆ 22 ಮಂದಿ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವೇಗಿ ಶ್ರೀಶಾಂತ್, ಚಾಂಡಿಲಾ ಅವರನ್ನು ಜೂನ್ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 26 ಜನರನ್ನು ಬಂಧಿಸಿದ್ದಾರೆ. ವಿವಾಹ ಕಾರಣಕ್ಕಾಗಿ ಅಂಕಿತ್ಗೆ ಜೂನ್ 6ರ ವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಕೇರಳದ ಆಟಗಾರ ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರಿಗೆ ಜಾಮೀನು ಲಭಿಸಿದೆ.