ದೇವನಹಳ್ಳಿ: ಬಕ್ರೀದ್ ಮತ್ತು ವಿಜಯ ದಶಮಿ ಹಬ್ಬಗಳ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ವಿವಿಧ ಸಮು ದಾಯದ ಮುಖಂಡರ ಸಭೆಯನ್ನು ವೃತ್ತ ನಿರೀಕ್ಷಕ ಮಂಜುನಾಥ್ ಅಧ್ಯ ಕ್ಷತೆಯಲ್ಲಿ ಮಂಗಳವಾರ ನಡೆಯಿತು .
ಸಿಪಿಐ ಮಂಜುನಾಥ್ ಮಾತನಾಡಿ, ಹಿಂದೂ ಮತ್ತು ಮುಸ್ಲಿಂರು ಪರಸ್ಪರ ಸಾಮರಸ್ಯ ಹಾಗೂ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ದಿಕ್ಕು ತಪ್ಪುತ್ತಿರುವ ಯುವ ಸಮದಾಯಕ್ಕೆ ಹಿರಿಯ ನಾಗರಿಕರು ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಹೇಳಿದರು.
ಹಬ್ಬಗಳನ್ನು ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸಲು ಪಟ್ಟಣದ ನಾಗರಿಕರು, ಧಾರ್ಮಿಕ ಮುಖಂಡರು ಸಹಕರಿಸಬೇಕು ಎಂದರು.
ಪುರಸಭೆ ಸದಸ್ಯ ಎಂ.ಕುಮಾರ್, ಶಶಿಕುಮಾರ್, ಮಾಜಿ ಸದಸ್ಯ ಸದ್ರು ಹುಸೇನ್ ಇದ್ದರು.