ಬೆಂಗಳೂರಿನ ಎಸ್.ಎಚ್. ಕರಣಿಕರು (ವಾ.ವಾ., ಜುಲೈ 25) ದೇವರ ರೂಪವೇನು? ಎಂದು ಕೇಳಿದ್ದಾರೆ. ಕ್ರಿ.ಶ. 2ನೇ ಶತಮಾನದ ಜೈನ ದಾರ್ಶನಿಕ ಆಚಾರ್ಯ ಸಮಂತಭದ್ರರು ‘ರತ್ನಕರಂಡಕ ಶ್ರಾವಕಾಚಾರ’ ಗ್ರಂಥದ 5ನೇ ಶ್ಲೋಕದಲ್ಲಿ ದೇವರನ್ನು ‘ಆಪ್ತ’ನೆಂದು ಕರೆದಿದ್ದು ಆತ ನಿರ್ದೋಷಿ, ಸರ್ವಜ್ಞ, ಹಿತೋಪದೇಶಿ ಎಂದು ತಿಳಿಸಿದ್ದಾರೆ. ಮುಂದಿನ ಮೂರು ಶ್ಲೋಕಗಳಲ್ಲಿ ಈ 3 ಗುಣಗಳ ಲಕ್ಷಣಗಳನ್ನು ತಿಳಿಸಿದ್ದಾರೆ.