ಸ್ವರೂಪಾನಂದರು ಶಿರಡಿ ಸಾಯಿಬಾಬಾ ದೇವರಲ್ಲ ಎನ್ನುತ್ತಾರೆ. ಪೇಜಾವರರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ದೇವರಲ್ಲ ಎನ್ನುತ್ತಾರೆ. ಇವರು ಅವರಲ್ಲ ಎನ್ನಬೇಕಾದರೆ, ಅವರ ಮುಖಪರಿಚಯ ಹಾಗೆ ಹೇಳಿದವರಿಗೆ ಇರಬೇಕು. ಸ್ವರೂಪಾನಂದರಿಗಾಗಲಿ, ಪೇಜಾವರರಿಗಾಗಲಿ ದೇವರ ಪರಿಚಯವಿದ್ದರೆ, ದೇವರ ರೂಪವೇನು?
ಗುಣ ಆಕಾರಗಳೇನು ಎಂಬುದನ್ನು ತಿಳಿಸಿ ಅರಿಯದ ಪಾಮರರ ಉದ್ಧಾರ ಮಾಡಬಾರದೇಕೆ? ಹಿಂದೊಮ್ಮೆ ಅಧ್ಯಾತ್ಮ ಗುರುಗಳೊಬ್ಬರನ್ನು ಭಕ್ತರೊಬ್ಬರು ‘ತಾವು ದೇವರನ್ನು ನೋಡಿರುವಿರಾ?’ ಎಂದು ಪ್ರಶ್ನಿಸಿದರು. ಗುರುಗಳು ‘ನಿಮ್ಮ ಮುಂದೆಯೇ ನಿಂತಿರುವೆನಲ್ಲಾ’ ಎಂದು ಉತ್ತರಿಸಿದರು.
ದೇವರು ಸರ್ವಾಂತರ್ಯಾಮಿ, ನಿರಾಕಾರ, ಅಣುರೇಣು ತೃಣಕಾಷ್ಠಗಳಲ್ಲಿಯೂ ಇದ್ದಾನೆ ಎಂದು ನಂಬುವುದಾದರೆ, ಸಾಯಿಬಾಬಾರಲ್ಲಿ, ರಾಘವೇಂದ್ರ ಸ್ವಾಮಿಗಳಲ್ಲಿಯೂ ಇರಬಾರದೇಕೆ?
– ಎಸ್.ಎಚ್. ಕರಣಿಕ್, ಬೆಂಗಳೂರು