ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ನೂಕನಬಂಡೆ ಗ್ರಾಮದಲ್ಲಿ ಧರ್ಮಗ್ರಂಥ ಕುರಾನ್ಗೆ ಕುಡಿದ ನಶೆಯಲ್ಲಿ ಅವಮಾನ ಮಾಡಿದನೆಂಬ ಕಾರಣಕ್ಕೆ ಯುವಕನೊಬ್ಬನ ಕೊಲೆ ನಡೆದಿದೆ.
ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಮಾನವೀಯ ಧರ್ಮವಾಗಿದ್ದು ಹಿಂಸೆಯನ್ನು ಯಾವತ್ತೂ ಒಪ್ಪುವುದಿಲ್ಲ. ಆ ಯುವಕನದು ‘ತಪ್ಪು’ ಆದರೆ ಅವನನ್ನು ಕೊಂದವರು ‘ಅಪರಾಧಿ’ಗಳಾಗಿದ್ದಾರೆ. ಅವನ ತಪ್ಪನ್ನು ತಿದ್ದುವ ಎಲ್ಲಾ ಅವಕಾಶಗಳೂ ಇದ್ದವು.
‘ಸರ್ವ ಜನಾಂಗದ ಶಾಂತಿಯ ತೋಟ’ವಾದ ನಮ್ಮ ದೇಶದಲ್ಲಿ ಧರ್ಮಾಂಧತೆಗೆ ಅವಕಾಶ ಮಾಡಿಕೊಡುವುದು ಬೇಡ. ಇಂತಹ ಘಟನೆಗಳು ನಮ್ಮ ರಾಷ್ಟ್ರೀಯತೆಗೆ ಮಾಡಿದ ಅವಮಾನ. ಇವುಗಳು ಮತ್ತೆ ಮರುಕಳಿಸದಿರಲಿ.