ಸತತ 8ನೇ ಬಾರಿ ಮುಕೇಶ್ ಅಂಬಾನಿ ಧನಿಕರ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವ ಸುದ್ದಿ ಪ್ರಕಟವಾಗಿದೆ. ಇದರಿಂದ ಮುಕೇಶ್ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಮತ್ತಷ್ಟು ಹೋರಾಡಲು ಪ್ರೇರಣೆ ಸಿಗಬಹುದು. ಹಾಗೆಯೇ ಯುವ ಉದ್ಯಮಿಗಳಿಗೆ ಮುಕೇಶ್ರಂತೆ ತಾವೂ ಆಗಬೇಕು ಎಂಬ ಉತ್ತೇಜನ ಸಿಗಬಹುದು.
ಇದೇ ರೀತಿ ದಾನ–ಧರ್ಮಗಳಲ್ಲಿ ತೊಡಗಿರುವ ವ್ಯಕ್ತಿಗಳ ಪಟ್ಟಿಯನ್ನೂ ಪ್ರಕಟ ಮಾಡಿದರೆ ತಮ್ಮ ಸ್ಥಾನ ಕಾಯ್ದುಕೊಳ್ಳಲು ಅಂತಹವರು ಇನ್ನಷ್ಟು ಧರ್ಮ ಕಾರ್ಯಗಳಲ್ಲಿ ತೊಡಗುತ್ತಾರೆ. ಒಂದು ಆರ್ಥಿಕ ಸಾಲಿನಲ್ಲಿ ಯಾವ ಸಂಸ್ಥೆ ಅಥವಾ ವ್ಯಕ್ತಿ ಹೆಚ್ಚಿನ ಆರ್ಥಿಕ ಸಹಾಯ ನೀಡಿದ್ದಾರೆ ಎಂದು ಸಮೀಕ್ಷೆ ಮಾಡಿ ಪ್ರಕಟಿಸಿದರೆ ಒಳಿತು. ಇದು ಬಡವರಿಗೆ ನೆರವಾಗಲು ಇತರರಿಗೆ ಪ್ರೇರಣೆ ಉಂಟು ಮಾಡುತ್ತದೆ.