ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾತ್ಮರ ಪಟ್ಟಿ ಪ್ರಕಟಿಸಿ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸತತ 8ನೇ ಬಾರಿ ಮುಕೇಶ್ ಅಂಬಾನಿ ಧನಿಕರ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದು­ಕೊಂಡಿರುವ ಸುದ್ದಿ ಪ್ರಕಟವಾಗಿದೆ. ಇದರಿಂದ ಮುಕೇಶ್ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲು­ವಾಗಿ ಮತ್ತಷ್ಟು ಹೋರಾಡಲು ಪ್ರೇರಣೆ ಸಿಗ­ಬಹುದು. ಹಾಗೆಯೇ ಯುವ ಉದ್ಯಮಿಗಳಿಗೆ ಮುಕೇಶ್‌ರಂತೆ ತಾವೂ ಆಗಬೇಕು ಎಂಬ ಉತ್ತೇಜನ ಸಿಗಬಹುದು. 

ಇದೇ ರೀತಿ ದಾನ–ಧರ್ಮಗಳಲ್ಲಿ ತೊಡ­ಗಿ­ರುವ ವ್ಯಕ್ತಿಗಳ ಪಟ್ಟಿಯನ್ನೂ ಪ್ರಕಟ ಮಾಡಿ­ದರೆ ತಮ್ಮ ಸ್ಥಾನ ಕಾಯ್ದುಕೊಳ್ಳಲು ಅಂತ­ಹ­ವರು ಇನ್ನಷ್ಟು ಧರ್ಮ ಕಾರ್ಯಗಳಲ್ಲಿ ತೊಡ­ಗುತ್ತಾರೆ. ಒಂದು ಆರ್ಥಿಕ ಸಾಲಿನಲ್ಲಿ ಯಾವ ಸಂಸ್ಥೆ ಅಥವಾ ವ್ಯಕ್ತಿ ಹೆಚ್ಚಿನ ಆರ್ಥಿಕ ಸಹಾಯ ನೀಡಿದ್ದಾರೆ ಎಂದು ಸಮೀಕ್ಷೆ ಮಾಡಿ ಪ್ರಕಟಿ­ಸಿ­ದರೆ ಒಳಿತು. ಇದು ಬಡವರಿಗೆ ನೆರವಾಗಲು ಇತರರಿಗೆ ಪ್ರೇರಣೆ  ಉಂಟು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT