ಉದಕಮಂಡಲ/ತಮಿಳುನಾಡು (ಪಿಟಿಐ): ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಕ್ಸಲರ ತಂಡ ಪೊಲೀಸ್ ಪೇದೆಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಗಡಿಯಂಚಿನ ಅರಣ್ಯದಲ್ಲಿ ಶೋಧ ಆರಂಭಿಸಲಾಗಿದೆ.
ಮಹಿಳೆ ಸೇರಿದಂತೆ ನಾಲ್ಕು ಜನರಿದ್ದ ತಂಡ ಕೇರಳದ ಮನಂಥ್ವಾಡಿಯಲ್ಲಿ ಸಂಚಾರಿ ಪೊಲೀಸ್ ಪೇದೆ ಪ್ರಮೋದ್ ಅವರಿಗೆ ಶುಕ್ರವಾರ ಬೆದರಿಕೆ ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.