ನವದೆಹಲಿ (ಪಿಟಿಐ): ಬಿಹಾರದಲ್ಲಿ ದೆಹಲಿ-ದಿಬ್ರುಗಡ ರಾಜಧಾನಿ ಎಕ್ಸಪ್ರೆಸ್ ಹಳ್ಳಿ ತಪ್ಪಿ ನಾಲ್ಕು ಜನರು ಮೃತಪಟ್ಟ ಘಟನೆಗೆ ಬಹುಬೇಗ ನಕಲ್ಸರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಹೇಳಿದರು.
`ಘಟನಾ ಸ್ಥಳದಲ್ಲಿರುವ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ನಾನು ನೇರವಾಗಿ ಮಾತನಾಡಿದ್ದೇನೆ. ದುರಂತದ ಎಲ್ಲ ಬೆಳವಣಿಗೆ ಕುರಿತಂತೆ ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ. ಬಹುಬೇಗ ನಕಲ್ಸರ ವಿರುದ್ಧ ಆರೋಪ ಮಾಡಲಾಗಿದೆ ಎಂಬ ನನ್ನ ಹೇಳಿಕೆ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆದು ಪ್ರಕರಣ ಕುರಿತಂತೆ ಹೊರಬರುವ ವರದಿಗಾಗಿ ಕಾಯ್ದು ನೋಡೋಣ' ಎಂದು ಸಿಂಗ್ ಅವರು ವರದಿಗಾರರನ್ನು ಉದ್ದೇಶಿಸಿ ಹೇಳಿದರು.
ಆದಾಗ್ಯೂ, ಕೂಡ ಸಿಂಗ್ ಅವರ ಈ ದುರಂತದ ಹಿಂದೆ ಮಾವೋವಾದಿಗಳ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದರು.
ಪಾಟ್ನಾದಿಂದ 75 ಕಿ.ಮೀ ದೂರದಲ್ಲಿರುವ ಗೋಲ್ಡನ್ ಗಂಜ್ ಬಳಿ ದೆಹಲಿ–ದಿಬ್ರುಗಡ ರಾಜಧಾನಿ ಎಕ್ಸ್ಪ್ರಸ್ ರೈಲು ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದು 12 ಬೋಗಿಗಳು ನೆಲಕ್ಕುರುಳಿವೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು 8 ಜನರಿಗೆ ಗಂಭೀರ ಗಾಯಗಳಾಗಿವೆ.
ಈ ಘಟನೆ ನಡೆದ ಸ್ಥಳದಲ್ಲಿ ಮೂರು ಟೈಂ ಬಾಂಬ್ಗಳು ಪತ್ತೆಯಾಗಿದ್ದು, ಇದೊಂದು ನಕ್ಸಲರ ಯೋಜಿತ ವಿಧ್ವಂಸಕ ಕೃತ್ಯ ಎಂದು ಶಂಕಿಸಲಾಗಿದೆ.