ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ವೆಂಕಟೇಶ ಅಧ್ಯಕ್ಷ

Last Updated 5 ಮಾರ್ಚ್ 2015, 7:44 IST
ಅಕ್ಷರ ಗಾತ್ರ

ಗಂಗಾವತಿ: ನಗರಸಭೆ ಅಧ್ಯಕ್ಷ  ಶಾಮೀದ ಮನಿಯಾರ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ­ಯಲ್ಲಿ 23ನೇ ವಾರ್ಡಿನ ಸದಸ್ಯ ಕೆ.ವೆಂಕಟೇಶ ಅವಿರೋಧ ಆಯ್ಕೆ­ಯಾದರು.

ಚುನಾವಣೆಯಲ್ಲಿ ಒಂದೇ ನಾಮ­ಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿ­ಕಾರಿ ಪಿ.ಎಸ್.ಮಂಜುನಾಥ ಅವಿರೋಧ ಆಯ್ಕೆ ಘೋಷಿಸಿದರು.

ನಗರಸಭೆಯ ಮೊದಲ ಅವಧಿಯ 30 ತಿಂಗಳಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಎಸ್ಟಿ ಪಂಗಡಕ್ಕೆ ಮೀಸಲಾಗಿತ್ತು. 16 ತಿಂಗಳು ಶಾಮೀದ ಮನಿಯಾರ ಅಧಿಕಾರ ನಿರ್ವಹಿಸಿದ್ದರು.

ಸದಸ್ಯರಿಗೆ ವಿಪ್: ನಗರಸಭೆಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅಕಾಂಕ್ಷಿಗಳನ್ನು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸೆಳೆಯಲು ಯತ್ನಿಸಿವೆ ಎಂಬ ಮಾಹಿತಿ ಕಾರಣಕ್ಕೆ, ಶಾಸಕ ಅನ್ಸಾರಿ ಮಂಗಳವಾರ ಸಂಜೆ ಎಲ್ಲ ಸದಸ್ಯರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಪ್ ಜಾರಿ ಮಾಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT