ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಗೋವಿಂದಗೆ ನೋಟಿಸ್‌

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಚಿತ್ರೀಕರಣದ ವೇಳೆ ವ್ಯಕ್ತಿ­ಯೊಬ್ಬನಿಗೆ ಕಪಾಳಮೋಕ್ಷ ಮಾಡಿ­ದ್ದರು ಎನ್ನಲಾಗಿರುವ ಪ್ರಕರ­ಣಕ್ಕೆ ಸಂಬಂಧಿ­ಸಿದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಹಿಂದಿ ಚಿತ್ರನಟ ಗೋವಿಂದಗೆ ಸುಪ್ರೀಂ­ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ಸಂತೋಷ ಬತೇಶ್ವರ ರಾಯ್‌ ಕೋರ್ಟ್‌ ಸುಪ್ರೀಂ­ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗೋವಿಂದ ಅವರ ವಿರುದ್ಧ ದಾಖ­ಲಾಗಿದ್ದ ಕ್ರಿಮಿ­­ನಲ್‌ ಪ್ರಕ­ರ­ಣ­ವನ್ನು ರದ್ದು­ಪಡಿಸಿ ಬಾಂಬೈ ಹೈಕೋರ್ಟ್‌ ಹೊರ­ಡಿಸಿದ್ದ ಆದೇಶವನ್ನು ರದ್ದು­ಗೊಳಿ­­ಸ­ಬೇಕು ಎಂದೂ ರಾಯ್‌ ಅರ್ಜಿಯಲ್ಲಿ ಮನವಿ ಮಾಡಿದ್ದರು.

ರಾಯ್‌ ಸಲ್ಲಿಸಿದ ವಿಶೇಷ ಅರ್ಜಿ­ಯನ್ನು ಅಂಗೀಕರಿಸಿದ ನ್ಯಾಯ­ಮೂರ್ತಿ ಟಿ.ಎಸ್‌.ಠಾಕೂರ್‌ ನೇತೃತ್ವದ ಪೀಠ ಗೋವಿಂದ ಅವರಿಗೆ ನೋಟಿಸ್‌ ಜಾರಿ ಮಾಡಿದೆ. 2008ರ ಜನವರಿಯಲ್ಲಿ  ಚಿತ್ರೀ­ಕರಣ ನೋಡಲು ಹೋಗಿದ್ದಾಗ ಗೋವಿಂದ ಅವರು ತಮ್ಮ ಎಡ ಕೆನ್ನೆಗೆ ಹೊಡೆದಿದ್ದರು. ಆಗ ಇದು ಮಾಧ್ಯಮದಲ್ಲಿ ಭಾರಿ ಸುದ್ದಿಯಾಗಿತ್ತು ಎಂದು ರಾಯ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT