‘ಆರೋಪ ಕೇಳಿ ಬಂದ ಕೂಡಲೇ ನನ್ನ ಆಪ್ತ ಕಾರ್ಯದರ್ಶಿ ಅವರನ್ನು ವಿಚಾರಿಸಿದೆ. ಇದೆಲ್ಲ ಸುಳ್ಳು ಎಂದು ಅವರು ಹೇಳಿದರು. ಮಂಗಳೂರಿನ ಜೈಲರ್ ಮತ್ತು ಪೊಲೀಸ್ ಕಮಿಷನರ್ ಅವರಿಗೂ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೇನೆ. ಅಂತಹ ಯಾವುದೇ ಬೆದರಿಕೆ, ಒತ್ತಡ ಬಂದಿಲ್ಲವೆಂದು ಜೈಲರ್ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಕೊಡುವಂತೆ ಕಮಿಷನರ್ ಅವರಿಗೆ ಸೂಚಿಸಿದ್ದೇನೆ’ ಎಂದು ಖಾದರ್ ಹೇಳಿದರು.