ಸಂಜೆ 5.30ಕ್ಕೆ ಮಣ್ಣು ಮಾಡಲಾಯಿತು. ಯಾಕೂಬ್ ಕುಟುಂಬ ವಾಸವಾಗಿರುವ ಮಾಹಿಮ್ ಪ್ರದೇಶ ಸೇರಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ 400ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೈಲು ನಿಯಮಾವಳಿ ಪ್ರಕಾರ, ಗಲ್ಲಿಗೇರಿದ ವ್ಯಕ್ತಿಯ ದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲು ಅವಕಾಶವಿಲ್ಲ. ಆದರೆ, ಯಾಕೂಬ್ ದೇಹವನ್ನು ಹಸ್ತಾಂತರಿಸುವಂತೆ ಕೋರಿ ಬುಧವಾರ ರಾತ್ರಿಯೇ ಯಾಕೂಬ್ ಅಣ್ಣ ಸುಲೇಮಾನ್ ಅವರು ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಈಡೇರದ ಆಸೆ
ಯಾಕೂಬ್ ಮೆಮನ್ ನೇಣಿಗೇರುವ ಮುನ್ನ ತನ್ನ 21 ವರ್ಷದ ಮಗಳು ಜುಬೇದಾಳನ್ನು ನೋಡಲು ಬಯಸಿದ್ದ. ಆದರೆ ಅದು ಈಡೇರಲೇ ಇಲ್ಲ. ಜೈಲು ಅಧಿಕಾರಿಗಳು ಬುಧವಾರ ರಾತ್ರಿ ದೂರವಾಣಿ ಮೂಲಕ ಆತ ತನ್ನ ಮಗಳೊಂದಿಗೆ ಮಾತನಾಡುವುದಕ್ಕೆ ವ್ಯವಸ್ಥೆ ಮಾಡಿದ್ದರು.