ಮೊದ ಮೊದಲು ಉತ್ತೇಜನಕಾರಿಯೂ, ಪರಿಣಾಮಕಾರಿಯೂ, ವಾಸ್ತವಿಕವೂ ಎನಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಬರಬರುತ್ತ ಅಪ್ರಸ್ತುತವೂ, ಅವಾಸ್ತವಿಕವೂ ಎನಿಸುತ್ತಿದೆ.
ಈ ತಿಂಗಳ 26ರಂದು ‘ಮನದ ಮಾತು’ ಕಾರ್ಯಕ್ರಮದಲ್ಲಿ ಪ್ರಧಾನಿ ಈ ಬಾರಿ ಮುಂಗಾರು ತೃಪ್ತಿಕರವಾಗಿದೆ ಎಂದು ಹೇಳಿದರು. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆಯ ಬಗ್ಗೆ ಏನನ್ನೂ ಹೇಳಲೇ ಇಲ್ಲ. ರೈತರ ಆತ್ಯಹತ್ಯೆಯಂಥ ಜ್ವಲಂತ ಸಮಸ್ಯೆಗಳಿಗೆ ಮಿಡಿಯದ, ಸ್ಪಂದಿಸದ, ಜನಮನದ, ಜನಜೀವನದ ನಾಡಿ ಹಿಡಿಯದ ‘ಮನದ ಮಾತು’ ಯಾರಿಗಾಗಿ?