ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪತ್ತೆಯಾದ ಯುವಕ ಶವವಾದ

Last Updated 20 ನವೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಮಾರುತಿ (22) ಎಂಬ ಯುವಕ, ಬಾಗಲಗುಂಟೆಯಲ್ಲಿ ಗುರುವಾರ ಶವವಾಗಿ ಪತ್ತೆ ಯಾಗಿದ್ದಾರೆ.

ಆತನ ಸ್ನೇಹಿತರೇ ಅವರನ್ನು ಚಾಕು ವಿನಿಂದ ಇರಿದು ಕೊಲೆ ಮಾಡಿದ್ದು, ಪ್ರಕರಣ ಸಂಬಂಧ ಈಗಾಗಲೇ ಅಶೋಕ್‌ (22) ಎಂಬಾತ ನನ್ನು ಬಂಧಿಸಲಾಗಿದೆ.

ಉಳಿದ ಆರೋಪಿ ಗಳಾದ ರಾಜೇಶ್‌ ಮತ್ತು ಸುಮಂತ್‌ ತಲೆಮರೆಸಿ ಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೂಲತಃ ಪಾವಗಡದವರಾದ ಮಾರುತಿ, ಪೀಣ್ಯ ಸಮೀಪದ ಮಲ್ಲಸಂದ್ರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು. ಶನಿವಾರ (ನ.15) ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ.

ಅಲ್ಲದೇ, ಅವರ ಮೊಬೈಲ್‌ ಸಹ ಸ್ಥಗಿತಗೊಂಡಿತ್ತು. ಇದರಿಂದ ಆತಂಕಗೊಂಡಿದ್ದ ಆತನ ಪೋಷಕರು ಭಾನುವಾರ (ನ. 16)  ಮಗ ಕಾಣೆಯಾಗಿದ್ದಾನೆ ಎಂದು ಪೀಣ್ಯ ಠಾಣೆಗೆ ದೂರು ನೀಡಿದ್ದರು.

ಆ ದೂರು ಆಧರಿಸಿ ಅಶೋಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ ಲಾಯಿತು. ಶನಿವಾರ ರಾತ್ರಿ ಮಾರುತಿ ಅವರನ್ನು ಕರೆದುಕೊಂಡು ಹೋಗಿ ಮದ್ಯಪಾನ ಮಾಡಿದೆವು.

ಈ ವೇಳೆ ಹಣಕಾಸಿವ ವಿಷಯವಾಗಿ ಜಗಳ ವಾಯಿತು. ನಂತರ ಆತನಿಗೆ ಚಾಕುವಿನಿಂದ ಚುಚ್ಚಿ  ಕೊಲೆ ಕೊಲೆ ಮಾಡಿ ಶವವನ್ನು ಚರಂಡಿಯಲ್ಲಿ ಎಸೆದಿದ್ದೆವು ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಉಳಿದ ಆರೋಪಿಗಳ ತಲೆಮರೆಸಿಕೊಂಡಿದ್ದಾರೆ. ಶವ ಪತ್ತೆ:  ಪೀಣ್ಯ ಮೆಟ್ರೊ ನಿಲ್ದಾಣದ ಬಳಿ ಶಶಿನಾಯಕ್ (28) ಎಂಬುವರ ಶವ ಪತ್ತೆಯಾಗಿದೆ.

ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೃತರ ಸಂಬಂಧಿಕರು ಇದ್ದಲ್ಲಿ, ಠಾಣೆಯ 080 2294 2532 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಶವ ಪಡೆದುಕೊಳ್ಳಬೇಕು ಎಂದು ಪೀಣ್ಯ ಪೊಲೀಸರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT