ಪಟ್ನಾ (ಪಿಟಿಐ): ಬಿಹಾರದಲ್ಲಿ ಜನತಾ ಪರಿವಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮುಂದುವರೆದರೆ ಯಾವುದೇ ಅಭ್ಯಂತರವಿಲ್ಲ ಎಂದು ಲಾಲ್ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಪಕ್ಷ ಗುರುವಾರ ತಿಳಿಸಿದೆ.
ಈ ಬಗ್ಗೆ ಆರ್ಜೆಡಿಯ ರಾಜ್ಯಾಧ್ಯಕ್ಷರಾದ ವಶಿಷ್ಠ ನರೇನ್ ಸಿಂಗ್ ಅವರು ‘ ನಿತೀಶ್ ಕುಮಾರ್ ಜನತಾ ಪರಿವಾರದ ಮುಖ್ಯಮಂತ್ರಿಯಾದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.
ಸಂಯುಕ್ತ ಜನತಾದಳವು ಮುಖ್ಯಮಂತ್ರಿ ಹುದ್ದೆ ಕುರಿತಂತೆ ಅಭಿಪ್ರಾಯ ತಿಳಿಸುವಂತೆ ಆರ್ಜೆಡಿ ಪಕ್ಷವನ್ನು ಕೋರಿತ್ತು. ಈಗಾಗಲೇ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ನಿತೀಶ್ ಕುಮಾರ್ಗೆ ಬೆಂಬಲ ಸೂಚಿಸಿವೆ.