ಮೈಸೂರಿನಲ್ಲಿ ದಸರಾ ಆರಂಭವಾಯಿತೆಂದರೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಲಗುವ ಜನರಿಗೆ ಪರ್ಯಾಯ ‘ಆಶ್ರಯ’ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದೇಶಿಗರಿಗೆ ತೊಂದರೆಯಾಗಬಾರದು. ಅವರಿಗೆ ಕಿರಿಕಿರಿ ಉಂಟಾಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ.
ದಸರಾ ಮುಗಿದ ಮೇಲೆ ಇವರ ಪಾಡು ಮತ್ತದೇ ಹಳೆಯ ಸ್ಥಿತಿ. ನಿರಾಶ್ರಿತರ ಬಗ್ಗೆ ಇಂತಹ ಕ್ಷಣಿಕ ಕರುಣೆ ಏಕೆ? ಇಂತಹ ಜನರಿಗೆ ಸರ್ಕಾರ ಶಾಶ್ವತವಾಗಿ ವಸತಿ ಕಲ್ಪಿಸಲು ತಕ್ಷಣಕ್ಕೆ ಆಗದಿದ್ದರೂ ಅವರಿಗೆ ಬದುಕುವ ದಾರಿ ತೋರಿಸಲು ಪ್ರಯತ್ನಿಸಬೇಕು.