ನವದೆಹಲಿ (ಪಿಟಿಐ): ಪಂಜಾಬ್ ರಾಜ್ಯದ ಗಡಿಯಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಸುರಕ್ಷಿತವಾಗಿಲ್ಲ ಎಂದು ಭಯೋತ್ಪಾದನಾ ದಾಳಿ ಕುರಿತು ತನಿಖೆ ನಡೆಸಿದ ಸಂಸದೀಯ ಸಮಿತಿ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದನಾ ದಾಳಿ ಕುರಿತು ತನಿಖೆ ನಡೆಸಿದ ಸಂಸದೀಯ ಸಮಿತಿಯ ಮುಖ್ಯಸ್ಥ ಪಿ.ಭಟ್ಟಾಚಾರ್ಯ ವಾಯುನೆಲೆ ಸಂಪೂಣರ್ವಾಗಿ ಅಸುರಕ್ಷಿತ ಎಂದಿದ್ದಾರೆ.
ಕಾಂಗ್ರೆಸ್ ಸಂಸದರಾಗಿರುವ ಭಟ್ಟಾಚಾರ್ಯ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಈ ತನಿಖೆ ನಡೆಸಿತ್ತು. ಈಗಲೂ ಪಠಾಣ್ ಕೋಟ್ ವಾಯುನೆಲೆ ಅತ್ಯಂತ ಅಭದ್ರವಾಗಿದ್ದು, ಉಗ್ರರು ಸುಲಭವಾಗಿ ವಾಯುನೆಲೆ ಪ್ರವೇಶ ಮಾಡಬಹುದಾಗಿದೆ ಎಂದು ಸಮಿತಿ ತಿಳಿಸಿದೆ.
ವಾಯುನೆಲೆ ಸುತ್ತಲಿನ ಗೋಡೆಯು ತುಂಬಾ ಕಳಪೆಯಾಗಿದೆ. ಸೂಕ್ತ ಕಾವಲು ಪಡೆ ಸಿಬ್ಬಂದಿಗಳು ಇಲ್ಲ ಎಂದು ಸಮಿತಿ ತಿಳಿಸಿದೆ. ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸಿ ಭದ್ರತಾ ಕ್ರಮ ಕೈಗೊಳ್ಳುವಂತೆ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
31 ಜನ ವಿವಿಧ ಪಕ್ಷಗಳ ಸಂಸದರು ಈ ತನಿಖಾ ಸಮಿತಿಯಲ್ಲಿ ಇದ್ದರು.