ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಸಂಸದ ಜೋಶಿ ಉಡುಗೊರೆ!

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಧಾರವಾಡ: ಸೋಮವಾರವಷ್ಟೇ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಚುನಾವಣೆ ಸಂದರ್ಭದಲ್ಲಿ ತಮ್ಮ ಬಗ್ಗೆ ‘ಮೃದು ಧೋರಣೆ’ ತಾಳುವಂತೆ ಮಾಧ್ಯಮದವರನ್ನು ಓಲೈಸಲು ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಉಡುಗೊರೆ­ಗಳನ್ನು ತಲುಪಿಸಿದರು.

ಸಂಜೆ ಧಾರವಾಡದ ವಿವಿಧ ಮಾಧ್ಯಮ ಸಂಸ್ಥೆಗಳ ಕಚೇರಿಗೆ ತೆರಳಿದ ಪಕ್ಷದ ಮುಖಂಡರಿಬ್ಬರು ಸುಮಾರು
ರೂ. 2,000 ಮೌಲ್ಯದ ಒಂದು ‘ಟೈಟನ್’ ಕಂಪೆನಿಯ ವಾಚ್ ಹಾಗೂ ಅಂದಾಜು ರೂ. 2,000 ಬೆಲೆ ಬಾಳುವ ‘ಸಿಯಾ­ರಾಮ್ಸ್‌ ಮಿನಿಯೇಚರ್‌’ ಕಂಪೆನಿಯ ಶರ್ಟ್ ಹಾಗೂ ಪ್ಯಾಂಟ್ ಪೀಸ್ ಇರುವ ಬ್ಯಾಗ್ ಕೊಟ್ಟರು.

‘ಪ್ರಜಾವಾಣಿ’ ಪ್ರತಿನಿಧಿ ಈ ಉಡುಗೊರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ‘ಧಾರವಾಡದ ಎಲ್ಲ ಪತ್ರಕರ್ತರಿಗೂ ಈ ಗಿಫ್ಟ್‌ ತಲುಪಿಸುವಂತೆ ಜೋಶಿ ಸಾಹೇಬರು ಹೇಳಿದ್ದಾರೆ. ನೀವು ತೆಗೆದುಕೊಳ್ಳದಿದ್ದರೆ ಅವರು ನನಗೆ ಬಯ್ಯುತ್ತಾರೆ’ ಎಂದು ಹೇಳುತ್ತಾ ಕೊಡಲು ಮುಂದಾದರು.

ಆದರೆ ‘ಪ್ರಜಾವಾಣಿ’ ಪ್ರತಿನಿಧಿ ಮನೋಜ್‌ಕುಮಾರ್‌ ಗುದ್ದಿ ಅವುಗಳನ್ನು ಪಡೆಯದೇ ವಾಪಸ್‌ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT