ವಾರ್ಡ್ ನಂಬರ್ 14ರಲ್ಲಿ ಜನ ದಟ್ಟನೆಯನ್ನು ನಿಯಂತ್ರಿಸುತ್ತಿದ್ದ ಪಕ್ಷದ ಬೆಂಬಲಿಗ ಸಿಂಗ್ ಅವರನ್ನು ಗ್ಯಾಂಗ್ಸ್ಟರ್ನೊಬ್ಬ ಗುಂಡಿಟ್ಟು ಕೊಂದಿದ್ದಾನೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಇನ್ನು, ಉತ್ತರ 24 ಪರಗಣ ಜಿಲ್ಲೆಯ ತಿತಾಗಡ್ನ ವಾರ್ಡ್ನಂಬರ್ 6ರಲ್ಲಿ ಆಂಧ್ರ ವಿದ್ಯಾಲಯದ ಎದುರು ಸರತಿಯಲ್ಲಿ ನಿಂತಿದ್ದ 55 ವರ್ಷದ ಪಂಚು ಸೋನ್ಕರ್ ಎಂಬುವರು ಗುಂಡು ತಗುಲಿ ಗಾಯಗೊಂಡಿದ್ದಾರೆ. ಅವರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಬಿ.ಎನ್.ಬೋಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.