ಕಾಗೋಡು ತಿಮ್ಮಪ್ಪನವರು ಸಚಿವರಾದ ನಂತರ, ಸಣ್ಣ ಹಳ್ಳಿಗಳಲ್ಲಿ ಕೂಡಾ ಗುಡ್ಡಗಳು ಹಾಗೂ ಗೋಮಾಳಗಳಿಗೆ ಉಳಿಗಾಲವಿಲ್ಲವಾಗಿದೆ. ಏಕೆಂದರೆ, ಸಚಿವರು ಸಾಗುವಳಿ ಪತ್ರ ಕೊಡುವುದಾಗಿ ಹೇಳಿರುವುದರಿಂದ ಎಲ್ಲರೂ ಗುಡ್ಡಗಳನ್ನು ಸಾಗುವಳಿ ಮಾಡತೊಡಗಿದ್ದಾರೆ. ಆದ್ದರಿಂದ ಕಂದಾಯ ಸಚಿವರು ಇದರ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಬೇಕು.