ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಸಂಬಂಧ ತಾನು ದಾಖಲಿಸಿರುವ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತವಾಗಿ ಪರಿಸಮಾಪ್ತಿ ವರದಿ ಸಲ್ಲಿಸುವುದಿಲ್ಲ ಎಂದು ಸಿಬಿಐ ಗುರುವಾರ ಸುಪ್ರೀಂಕೋರ್ಟ್ನಲ್ಲಿ ಸ್ಪಷ್ಟಪಡಿಸಿತು.
ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ, ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಸಿಬಿಐ ಪರ ವಕೀಲರು ಹೀಗೆ ಹೇಳಿದರು.
‘ಈ ಹಗರಣ ಕುರಿತ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಕೇಂದ್ರೀಯ ವಿಚಕ್ಷಣಾ ಆಯೋಗದ (ಸಿವಿಸಿ) ಅಭಿಪ್ರಾಯವನ್ನು ಕೇಳದೆ ಸಿಬಿಐ ಪರಿಸಮಾಪ್ತಿ ವರದಿಗಳನ್ನು ಸಲ್ಲಿಸುತ್ತಿರುವ ಉದಾಹರಣೆಗಳಿವೆ’ ಎಂದು ‘ಕಾಮನ್ ಕಾಸ್’ ಎಂಬ ಸ್ವಯಂ ಸೇವಾ ಸಂಸ್ಥೆ ಅರ್ಜಿ ಹಾಕಿತ್ತು. ಇದರ ವಿಚಾರಣೆ ವೇಳೆ ಸಿಬಿಐ ಮೇಲಿನಂತೆ ತಿಳಿಸಿದೆ.