ಪಶ್ಚಿಮಘಟ್ಟದ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯ ಗುರುತಿಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ (ಪ್ರ.ವಾ., ಸೆ. 26).
ಆದರೆ ಸುಮಾರು 10–15 ವರ್ಷಗಳ ಅವಿರತ ಪರಿಶ್ರಮದಿಂದ ರೂಪುಗೊಂಡ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರ ವರದಿಯನ್ನು ಪಕ್ಕಕ್ಕಿಟ್ಟು, ಡಾ.ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿದಾಗಲೇ ಪಶ್ಚಿಮ ಘಟ್ಟದ ಹಣೆಬರಹ ಬಹುತೇಕ ನಿಶ್ಚಯವಾಗಿತ್ತು.
ಈಗ ಸರ್ಕಾರದ ಅಧಿಕಾರಿಗಳ ನೇತೃತ್ವದ (ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ) ಸಮಿತಿಗಳು ಏನು ಮಾಡಿಯಾವು?
ಸರ್ಕಾರದ ಋಣದಲ್ಲಿರುವ ಈ ಅಧಿಕಾರಿಗಳು ಪಶ್ಚಿಮಘಟ್ಟ ಉಳಿಸುವ ಸಂಬಂಧ ಸರ್ಕಾರದ ಆಶಯದ ವಿರುದ್ಧ ವರದಿ ಕೊಡುತ್ತಾರೆಂದು ಯಾರಾದರೂ ನಂಬಲಿಕ್ಕೆ ಸಾಧ್ಯವಿದೆಯೇ?