ಜಮ್ಮು (ಐಎಎನ್ಎಸ್) : ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೈನಿಕರು ಪೂಂಚ್ ಜಿಲ್ಲೆಯ ಭಿಂಬರ್ ಗಲಿ ನಿಯಂತ್ರಣ ರೇಖೆ ಬಳಿ ನಡೆಸಿದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿದೆ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನಿಷ್ ಮೆಹ್ತಾ ಸೋಮವಾರ ತಿಳಿಸಿದ್ದಾರೆ.
ಮುಂಜಾನೆ 5.15 ರ ವೇಳೆಗೆ ಪಾಕ್ ಸೈನಿಕರು ನಿಯಂತ್ರಣ ರೇಖೆ ಬಳಿ ಗುಂಡಿದ ದಾಳಿ ನಡೆಸಿದರು. ಪ್ರತ್ಯುತ್ತರವಾಗಿ ನಾವು ಸಹ ದಾಳಿ ನಡೆಸಿದ್ದೇವೆ. ನಮ್ಮ ಕಡೆ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಏಪ್ರಿಲ್ 25 ರಂದು ಇದೇ ಪ್ರದೇಶದಲ್ಲಿ ಪಾಕ್ ಪಡೆ ಗುಂಡಿನ ದಾಳಿ ನಡೆಸಿತ್ತು.