ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಸೈನಿಕರಿಂದ ಮತ್ತೆ ಗುಂಡಿನ ದಾಳಿ

Last Updated 28 ಏಪ್ರಿಲ್ 2014, 12:57 IST
ಅಕ್ಷರ ಗಾತ್ರ

ಜಮ್ಮು (ಐಎಎನ್ಎಸ್) : ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೈನಿಕರು ಪೂಂಚ್ ಜಿಲ್ಲೆಯ ಭಿಂಬರ್ ಗಲಿ ನಿಯಂತ್ರಣ ರೇಖೆ ಬಳಿ ನಡೆಸಿದ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿದೆ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನಿಷ್ ಮೆಹ್ತಾ ಸೋಮವಾರ ತಿಳಿಸಿದ್ದಾರೆ.

ಮುಂಜಾನೆ 5.15 ರ ವೇಳೆಗೆ ಪಾಕ್ ಸೈನಿಕರು ನಿಯಂತ್ರಣ ರೇಖೆ ಬಳಿ ಗುಂಡಿದ ದಾಳಿ ನಡೆಸಿದರು. ಪ್ರತ್ಯುತ್ತರವಾಗಿ ನಾವು ಸಹ ದಾಳಿ ನಡೆಸಿದ್ದೇವೆ. ನಮ್ಮ ಕಡೆ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಏಪ್ರಿಲ್ 25 ರಂದು ಇದೇ ಪ್ರದೇಶದಲ್ಲಿ ಪಾಕ್ ಪಡೆ ಗುಂಡಿನ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT