ಹೈಕಮಾಂಡ್ ಸಂಸ್ಕೃತಿಯ, ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಯ ‘ಸೋನಿಯಾ, ರಾಹುಲ್’ ಎಂಬ ಒಂದೂವರೆ ನಾಯಕತ್ವದ ಕಾಂಗ್ರೆಸ್, ಲೋಕಸಭೆ, ವಿಧಾನಸಭೆಗಳ ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತ ಇದೀಗ ದೆಹಲಿ ಚುನಾವಣೆಯಲ್ಲಿ ‘ಶೂನ್ಯಸಂಪಾದನೆ’ ಮಾಡಿದ್ದಾಯ್ತು.
ಆದರೂ ಅದರ ರಾಷ್ಟ್ರ, ರಾಜ್ಯ ಮಟ್ಟದ ನೇತಾರರು ಆತ್ಮಾವಲೋಕನ, ಗಂಭೀರ ಸ್ವವಿಮರ್ಶೆ ಮಾಡಿಕೊಳ್ಳದೆ, ಪಾಠ ಕಲಿಯದೆ ಪ್ರಧಾನಿ ನರೇಂದ್ರ ಮೋದಿ ಬಗೆಗೆ ನಂಜುಕಾರುತ್ತ ಸೋನಿಯಾ ಸ್ತುತಿಯಲ್ಲಿ, ರಾಹುಲ್ ಭಟ್ಟಂಗಿತನದಲ್ಲಿ ಕಾಲಹರಣ ಮಾಡುತ್ತಾ, ಆ ಪಕ್ಷವನ್ನು ಇತಿಹಾಸದ ಕಸದ ಬುಟ್ಟಿಗೆ ಸೇರಿಸುತ್ತಿರುವುದೇ ಒಂದು ದುರಂತ ಸೇವೆ. ಸರಳತೆ, ವಿಶ್ವಾಸಾರ್ಹತೆ ಮೈಗೂಡಿಸಿಕೊಂಡು ಕೆಲಸ ಮಾಡಿದರೆ ಕಾಂಗ್ರೆಸ್ಗೆ ಭವಿಷ್ಯ ಉಂಟು.