‘ಹೆಚ್ಚೆಚ್ಚು ಪಾಪಕೃತ್ಯ ಎಸಗುವವರು ಮತ್ತು ಭಾರಿ ಸಂಕಷ್ಟದಲ್ಲಿ ಸಿಲುಕಿದವರು ದೇವಸ್ಥಾನಕ್ಕೆ ಕಾಣಿಕೆ ನೀಡಿ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ’ ಎಂದು ಬುಧವಾರ ಇಲ್ಲಿ ಆರಂಭವಾದ ಜಿಲ್ಲಾಧಿಕಾರಿಗಳ ಸಮಾವೇಶದಲ್ಲಿ ತಿಳಿಸಿದ್ದಾರೆ.
‘ಜನರು ಮಾನಸಿಕ ನೆಮ್ಮದಿ ಪಡೆಯಲು ದೇವಾಲಯ ಮಾತ್ರವಲ್ಲದೆ, ಚರ್ಚ್ ಮತ್ತು ಮಸೀದಿಗಳಿಗೂ ಭೇಟಿ ನೀಡುತ್ತಾರೆ. ದೇವಾಲಯ, ಚರ್ಚ್ ಹಾಗೂ ಮಸೀದಿಗಳು ಇಲ್ಲದೇ ಇದ್ದಲ್ಲಿ ಎಷ್ಟೋ ಜನರು ಹುಚ್ಚರಾಗಿ ಬಿಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ.