ನವದೆಹಲಿ (ಪಿಟಿಐ): ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ಪಕ್ಷದ ಪುನಶ್ಚೇತನ ಕಾರ್ಯದಲ್ಲಿ ತೊಡಗಿದಂತಿದೆ. ಐದು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿರುವ ಕಾಂಗ್ರೆಸ್, ಆ ಹುದ್ದೆಗಳಿಗೆ ಸೋಮವಾರ ಹೊಸಬರನ್ನು ನೇಮಿಸಿದೆ. ಇದೇ ವೇಳೆ, ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಜವಾಬ್ದಾರಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ್ ನಿರುಪಮ್ ಅವರಿಗೆ ನೀಡಲಾಗಿದೆ.