ಅಲ್ವಾರಾ (ಪಿಟಿಐ): ಯೋಗಗುರು ರಾಮ್ದೇವ್ ಅಲ್ವಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾಂತ್ ಚಂದನಾಥ್ ಜತೆ ಹಣಕಾಸು ವಿಷಯದ ಬಗ್ಗೆ ಗುಟ್ಟಾಗಿ ಮಾತನಾಡುತ್ತಿದ್ದ ವಿಷಯವನ್ನು ದಾಖಲಿಸಿಕೊಂಡ ಟಿವಿ ಚಾನೆಲ್ ಬಹಿರಂಗಪಡಿಸಿದೆ.
ಪತ್ರಿಕಾಗೋಷ್ಠಿಗೂ ಮೊದಲು ಮಹಾಂತ್ ಚುನಾವಣೆಗೆ ಹಣ ಸಾಕಾಗುತ್ತಿಲ್ಲ ಎಂದು ರಾಮ್ದೇವ್ ಬಳಿ ಹೇಳಿದರು. ಆಗ ರಾಮ್ದೇವ್ ಅವರು ಇಲ್ಲಿ ಧ್ವನಿವರ್ಧಕಗಳು ಆನ್ ಆಗಿರುವುದರಿಂದ ಹಣದ ವಿಷಯ ಮಾತನಾಡಬೇಡ ಸುಮ್ಮನಿರು ಎಂದರು. ಆಗ ಧ್ವನಿವರ್ಧಕಗಳು ಆನ್ ಆಗಿದ್ದವು. ಇದನ್ನೇ ಟಿವಿ ಚಾನೆಲ್ಗಳು ದಾಖಲಿಸಿಕೊಂಡು ಗುಟ್ಟನ್ನು ಬಹಿರಂಗಪಡಿಸಿ ರಾಮ್ದೇವ್ ಅವರನ್ನು ಪೇಚಿಗೆ ಸಿಲುಕಿಸಿದೆ. ಮತದಾರರಿಗೆ ಹಣ ಹಂಚುತ್ತಿರುವ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.