ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಚಿಗೆ ಸಿಲುಕಿದ ರಾಮ್ ದೇವ್‌

Last Updated 17 ಏಪ್ರಿಲ್ 2014, 20:19 IST
ಅಕ್ಷರ ಗಾತ್ರ

ಅಲ್ವಾರಾ (ಪಿಟಿಐ): ಯೋಗಗುರು ರಾಮ್‌ದೇವ್ ಅಲ್ವಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾಂತ್ ಚಂದನಾಥ್ ಜತೆ ಹಣಕಾಸು ವಿಷಯದ ಬಗ್ಗೆ ಗುಟ್ಟಾಗಿ ಮಾತ­ನಾಡುತ್ತಿದ್ದ ವಿಷಯವನ್ನು ದಾಖಲಿಸಿಕೊಂಡ ಟಿವಿ ಚಾನೆಲ್‌ ಬಹಿರಂಗ­ಪಡಿ­ಸಿದೆ.

ಪತ್ರಿಕಾಗೋಷ್ಠಿಗೂ ಮೊದಲು ಮಹಾಂತ್ ಚುನಾವಣೆಗೆ ಹಣ ಸಾಕಾ­ಗು­ತ್ತಿಲ್ಲ ಎಂದು ರಾಮ್‌ದೇವ್ ಬಳಿ ಹೇಳಿದರು. ಆಗ ರಾಮ್‌ದೇವ್‌ ಅವರು ಇಲ್ಲಿ ಧ್ವನಿ­ವರ್ಧಕಗಳು ಆನ್‌ ಆಗಿರುವುದರಿಂದ ಹಣದ ವಿಷಯ ಮಾತನಾಡಬೇಡ ಸುಮ್ಮ­ನಿರು ಎಂದರು. ಆಗ ಧ್ವನಿವರ್ಧಕಗಳು ಆನ್‌ ಆಗಿದ್ದವು. ಇದನ್ನೇ ಟಿವಿ ಚಾನೆಲ್‌ಗಳು ದಾಖ­ಲಿಸಿಕೊಂಡು ಗುಟ್ಟನ್ನು ಬಹಿರಂಗಪಡಿಸಿ ರಾಮ್‌ದೇವ್‌ ಅವರನ್ನು ಪೇಚಿಗೆ ಸಿಲುಕಿಸಿದೆ. ಮತದಾರರಿಗೆ ಹಣ ಹಂಚುತ್ತಿರುವ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT