ಗದಗ: ನರಗುಂದದಲ್ಲಿ ರೈತರ ಮೇಲೆ ಪೊಲೀಸ್ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೀಡಾಗಿರುವ ಗದಗ ಜಿಲ್ಲೆಯಲ್ಲಿ ನೀರು ಕೇಳಿ ಪ್ರತಿಭಟನೆ ನಡೆಸಿದ ರೈತರಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ಪೊಲೀಸರ ಈ ದೌರ್ಜನ್ಯವನ್ನು ಖಂಡಿಸಿ ನರಗುಂದ ನಿವಾಸಿ ರೈತ ಮುತ್ತಣ್ಣ ತಿರ್ಲಾಪುರ ಎಂಬವರು ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪೊಲೀಸರು ಈ ರೀತಿ ಹೊಡೆಯುವ ಬದಲು, ನಮ್ಮನ್ನು ಸುಟ್ಟು ಬಿಡಿ ಎಂದು ದೌರ್ಜನ್ಯಕ್ಕೊಳಗಾದ ರೈತರು ಕಣ್ಣೀರಿಟ್ಟಿದ್ದಾರೆ.