ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ದರೋಡೆ: ಯುವತಿಯಿಂದ ಕೃತ್ಯ

Last Updated 26 ಅಕ್ಟೋಬರ್ 2014, 9:02 IST
ಅಕ್ಷರ ಗಾತ್ರ

ಬೆಂಗಳೂರು: ಸುಬ್ರಹ್ಮಣ್ಯಪುರ ಸಮೀ­-ಪದ ಆರ್‌ಬಿಐ ಕಾಲೊನಿಯಲ್ಲಿ ಸ್ಕೂಟರ್‌ನಲ್ಲಿ ಬಂದ ಯುವತಿ­ಯೊಬ್ಬಳು, ವಾಯುವಿಹಾರ ಮಾಡು­ತ್ತಿದ್ದ ವೆಂಕಟರಾಮಯ್ಯ (75) ಎಂಬುವರಿಂದ 25 ಗ್ರಾಂನ ಚಿನ್ನದ ಸರ ದೋಚಿ ಪರಾರಿ­ಯಾಗಿದ್ದಾಳೆ.

ಆರ್‌ಬಿಐ ಲೇಔಟ್‌ನ ಬ್ರಿಗೇಡ್‌ ಗಾರ್ಡೇನಿಯಾ ಅಪಾರ್ಟ್‌­ಮೆಂಟ್‌­ನಲ್ಲಿ ವಾಸವಾಗಿರುವ ವೆಂಕಟರಾ­ಮಯ್ಯ ಅವರು ಸಮೀಪದ ಉದ್ಯಾ­ನ­ದಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದರು. ಆಗ  ಸ್ಕೂಟರ್‌ನಲ್ಲಿ ಬಂದ ಯುವತಿ ತಾನು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳ್ಳತನ ಮಾಡಲು ಸುತ್ತಮುತ್ತ­ಲಿನ ಮನೆಗಳನ್ನು ಗಮನಿಸುತ್ತಿದ್ದೀರಿ. ನಿಮ್ಮನ್ನು ತಪಾಸಣೆ ಮಾಡಬೇಕು ಠಾಣೆಗೆ ಬನ್ನಿ ಎಂದು ಆಕೆ ಕರೆದಳು. ಆದರೆ, ಆಕೆಯೊಂದಿಗೆ ಹೋಗದೆ ಮನೆ ಕಡೆಗೆ ಹೋಗುತ್ತಿದ್ದಾಗ  ಹಿಂಬಾ­ಲಿಸಿ ಬಂದು ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಉಂಗುರ ಕಿತ್ತುಕೊಂಡು ನನ್ನನ್ನು ತಳ್ಳಿ ಪರಾರಿಯಾದಳು’ ಎಂದು ವೆಂಕಟ­ರಾಮಯ್ಯ ದೂರು ನಿಡಿದ್ದಾರೆ.

ವೆಂಕಟರಾಮಯ್ಯ, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ವಯಸ್ಸು 25ರಿಂದ 30 ವರ್ಷ ಎಂದು ತಿಳಿದಿದ್ದು, ಪತ್ತೆ ಕಾರ್ಯ ನಡೆ­ಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯ­ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT