ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆಗೆ ಸಂಗೀತದ ಮೆರಗು

Last Updated 25 ಏಪ್ರಿಲ್ 2014, 5:54 IST
ಅಕ್ಷರ ಗಾತ್ರ

ಭಾಲ್ಕಿ: ಸಾಮಾನ್ಯವಾಗಿ ಪೊಲೀಸ್‌ ಠಾಣೆಯಲ್ಲಿ ಹೊದರೆ ಹೊಡಿ, ಬಡಿ ಆತಿಥ್ಯ, ಜೊತೆಗೆ ಬೈಯ್ಗುಳದ ಮಂಗ­ಳಾ­ರತಿ. ಪೊಲೀಸ್‌ ಸಿಬ್ಬಂದಿ ಬೀದಿ­ಯಲ್ಲಿ ಹೊರಟರೆ ಅವರ ದರ್ಪದ ನುಡಿಗಳಿಗೆ ಜನಸಾಮಾನ್ಯರು ಮಾರು ದೂರ ಸರಿಯುವದನ್ನು ಎಲ್ಲೆಡೆ ಕಾಣು­ತ್ತೇವೆ. ಆದರೆ, ಇದಕ್ಕೆಲ್ಲ ಅಪವಾದ ಭಾಲ್ಕಿಯ ನಗರ ಠಾಣೆ.

ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಡಿವೈಎಸ್‌ಪಿ ಬಿ.ಎಸ್ ಮಾಲ­ಗತ್ತಿ , ಜನಪದ, ತತ್ವಪದ, ದಾಸರ ಪದ, ವಚನ ಗಾಯನದಲ್ಲಿ ಆಸಕ್ತಿ ಹೊಂದಿ­ರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನಕಟ್ಟಿ ಅವರ ಇಂಪಾದ ಧ್ವನಿ, ಎಎಸ್‌ಐ ಹಣ­ಮಂತಪ್ಪ ಚಿದ್ರಿ ಕೊಳಲುವಾದಕ. ಇನ್ನೊಬ್ಬ ಎಎಸ್ಐ ಚಂದ್ರಕಾಂತ ಥಮಕೆ, ಕಾನ್‌ಸ್ಟೆಬಲ್‌ ಭಾಗವತ್, ಸುಧಾಕರ್, ಮಡೋಳಪ್ಪ, ಶಿವಾನಂದ ಮುಂತಾದವರು ತಬಲಾ, ತಂಬೂರಿ, ತಾಳ ಬಾರಿಸುವದರಲ್ಲಿ ಪಳಗಿದವರು.

ಶಾಲಾ ವಾರ್ಷಿಕೋತ್ಸವ, ಬೀಳ್ಕೊ­ಡುವ ಸಮಾರಂಭ, ದೇವಸ್ಥಾನಗಳಲ್ಲಿ ನಡೆಯುವ ಧರ್ಮ ಸಭೆಗಳಲ್ಲಿ ಈಗ ನಗರ ಠಾಣೆಯ ಸಿಬ್ಬಂದಿಯನ್ನು ಅತಿಥಿಗಳಾಗಿ ಕರೆಯುವುದೇ ಒಂದು ಹೆಮ್ಮೆ ಎಂಬಂತಾಗಿದೆ. ಪೊಲೀಸ್ ಸಿಬ್ಬಂದಿ ಈಚೆಗೆ ಭಾಲ್ಕಿಯಲ್ಲಿ ನಡೆದ ವಚನ ಜಾತ್ರೆ ಹಾಗೂ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸ­ವ­ದಲ್ಲಿ  ಕಾರ್ಯಕ್ರಮ ನೀಡಿ ಜನಮನ ಸೂರೆಗೊಂಡರು.

ಸಿಪಿಐ ಜ್ಯೋತಿರ್ಲಿಂಗ ಹೊನಕಟ್ಟಿ­ಯವರ ಗಾಯನ ಮಂತ್ರ ಮುಗ್ಧ­ರನ್ನಾ­ಗಿಸಿತ್ತು. ಬಾಗಲಕೋಟೆಯವರಾದ ಹೊನಕಟ್ಟಿ ಅವರು ಜನಪದದಲ್ಲಿ ಪದವಿಧರರು. ಜನಪದ ಗಾಯನ, ಗೀಗೀ ಪದ, ದಾಸರ ಪದ, ವಚನ ಗಾಯನ, ಹಂತಿ ಪದ, ಡಪ್ಪಿನ ಪದ ಮುಂತಾದ ಹಾಡುಗಳನ್ನು ಸುಶ್ರಾವ್ಯ­ವಾಗಿ ಹಾಡುತ್ತಾರೆ. ಅವರ ಹಾಡಿಗೆ ಪೊಲೀಸ್‌ ಸಿಬ್ಬಂದಿ ಸಾಥ್ ನೀಡುತ್ತಾರೆ.

ಹಾಗಂತ ಅಪರಾಧಿಗಳಿಗೆ ಬಿಡುಗಡೆ ಇದೆ ಅಂತ ಭಾವಿಸಬೇಕಿಲ್ಲ. ಇದೇ ಠಾಣೆಯ ಸಿಬ್ಬಂದಿ ಅಪರಾಧಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. ಸಜ್ಜನರ ರಕ್ಷಕರಾಗಿ, ಅಪರಾಧಿಗಳನ್ನು ದಂಡಿ­ಸುವ ಮಾಲಗತ್ತಿ ಮತ್ತು ಹೊನಕಟ್ಟಿ , ಸಿಬ್ಬಂದಿ ಬಗ್ಗೆ ಜನರಲ್ಲಿ ಅಭಿಮಾನ ಇದೆ ಎಂದುಭಾಲ್ಕಿಯ ಹಿರಿಯ ಮುಖಂಡ ರಾಚಪ್ಪ ಗೋರ್ಟೆ ಮತ್ತು ಅಪ್ಪಾ ಸಾಹೇಬ್‌ ದೇಶಮುಖ್‌ ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT