ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ಬಡಜನರ, ಕೂಲಿಕಾರರ ಹಿತದೃಷ್ಟಿಯಿಂದ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುತ್ತಿರುವುದು ಸಂತೋಷದ ಸಂಗತಿ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಅಂಗನವಾಡಿಗಳಿಗೂ ಪೌಷ್ಟಿಕಾಂಶದ ಬಿಸಿಯೂಟ ಸರಬರಾಜು ಆಗುತ್ತಿದೆ.
ಆದರೆ ಅಲ್ಲಿಗೆ ಸರಬರಾಜು ಮಾಡುತ್ತಿರುವ ಅಕ್ಕಿಯನ್ನು ಮೂರು ಮೂರು ಸಾರಿ ಪಾಲಿಷ್ ಮಾಡಿ ಮಲ್ಲಿಗೆ ಹೂವಿನಂತಾಗಿಸಿ, ಆಹಾರದ ಪೌಷ್ಟಿಕಾಂಶ ಸೊನ್ನೆಯಾಗುವಂತೆ ಮಾಡಲಾಗುತ್ತಿದೆ. ಆದ್ದರಿಂದ ಈ ರೀತಿಯ ಮಲ್ಲಿಗೆ ಹೂವಿನಂತಹ ಬಿಳಿ ಅಕ್ಕಿ ಮಾಡದೆ ಭತ್ತದ ಹೊಟ್ಟು ತೆಗೆದು ಒಂದೇ ಒಂದು ಪಾಲಿಷ್ ಮಾಡಿದ ಪೌಷ್ಟಿಕಾಂಶ ಇರುವಂತಹ ಅಕ್ಕಿಯನ್ನೇ ಆಹಾರ ಭದ್ರತೆಯ ಕಾರ್ಡು ಹೊಂದಿದವರಿಗೆ, ಬಿಸಿಯೂಟಕ್ಕೆ ಮತ್ತು ಅಂಗನವಾಡಿಗಳಿಗೆ ಸಿಗುವಂತೆ ಸರ್ಕಾರ ಏರ್ಪಾಟು ಮಾಡಬೇಕು.
–ಕಡಿದಾಳು ಶಾಮಣ್ಣ ಭಗವತಿ ಕೆರೆ, ಶಿವಮೊಗ್ಗ