ನವದೆಹಲಿ (ಪಿಟಿಐ): ಬಲವಂತಮತಾಂತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಶುಕ್ರವಾರ ಕೂಡ ಕೋಲಾಹಲ ನಡೆಯಿತು.
ಇದರೊಂದಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಐದು ದಿನ ಕೂಡ ಗದ್ದಲ ಮುಂದುವರಿದು ಮಧ್ಯಾಹ್ನದ ಊಟದ ಬಿಡುವಿಗೆ ಮುನ್ನವೇ ಸಭಾಧ್ಯಕ್ಷರು ಪಿ.ಜೆ. ಕುರಿಯನ್ ಅವರು ಎರಡು ಬಾರಿ ಸದನವನ್ನು ಮುಂದೂಡಿದರು.
ಈ ವಿವಾದ ಕುರಿತು ನಡೆಯುತ್ತಿರುವ ಚರ್ಚೆಗೆ ನರೇಂದ್ರ ಮೋದಿ ಅವರು ಉತ್ತರಿಸಬೇಕೆಂದು ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು ತೀವ್ರವಾಗಿ ಒತ್ತಾಯಿಸಿದರು.