ಮತ್ತೊಂದಡೆ, ಮುಖ್ಯಮಂತ್ರಿ ಅವರ ಮಾತಿಗೆ ದನಿಗೂಡಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಹಾದಾಯಿ, ಕಳಸಾ–ಬಂಡೂರಿ ಯೋಜನೆ ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಯಕತ್ವ ಬದಲು! (ಹುಬ್ಬಳ್ಳಿ ವರದಿ): ಮಹಾದಾಯಿ ಯೋಜನೆಗಾಗಿ ಆಗ್ರಹಿಸಿ ನರಗುಂದದಲ್ಲಿ ಕಳೆದ 44 ದಿನಗಳಿಂದ ನಡೆಯುತ್ತಿದ್ದ ರೈತಸೇನಾ ಹೋರಾಟದ ನಾಯಕತ್ವ ಶುಕ್ರವಾರ ದಿಢೀರನೆ ಬದಲಾಗಿದೆ.